Advertisement

ತೀರ್ಥಹಳ್ಳಿ: ಗೃಹ ಸಚಿವರ ಬೆಂಗಾವಲು ವಾಹನ ಅಪಘಾತ

07:09 PM Aug 15, 2022 | Team Udayavani |

ತೀರ್ಥಹಳ್ಳಿ: ಗೃಹ ಸಚಿವರ ಬೆಂಗಾವಲಿನ ಬೊಲೆರೋಗೆ ಕಾರೊಂದು ಢಿಕ್ಕಿ ಹೊಡೆದ ಘಟನೆ  ಉಂಬ್ಳೆಬೈಲಿನಲ್ಲಿ ಸಮೀಪ ನಡೆದಿದೆ.

Advertisement

ಗೃಹ ಸಚಿವ ಆರಗ ಜ್ಞಾನೇಂದ್ರರವರು ಬೆಂಗಳೂರಿನ  ಕಾರ್ಯಕ್ರಮ ಮುಗಿಸಿ  ಸೋಮವಾರ ತುಮಕೂರಿನಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವದ ದ್ವಜಾರೊಹಣ ನೆರವೇರಿಸಿ ಪುನಃ ತೀರ್ಥಹಳ್ಳಿಗೆ ಬರುತ್ತಿರುವ ಮಾರ್ಗದ ಮಧ್ಯ ಉಂಬ್ಳೇಬೈಲ್ ಹತ್ತಿರ ಗೃಹ ಸಚಿವರ ಎಸ್ಕಾರ್ಟ್  ಬೊಲೆರೋ ವಾಹನ ಹಾಗೂ ಕಾರು ಮುಖಾಮುಖಿ ಢಿಕ್ಕಿ ಹೊಡೆದಿದೆ.

ಕಾರು ಮತ್ತು ಜೀಪ್ ಜಖಂ ಆಗಿರುತ್ತದೆ.  ಬೊಲೆರೋ ಮುಂಭಾಗ ನುಜ್ಜುಗುಜ್ಜಾಗಿದೆ. ಯಾರಿಗೂ ಯಾವುದೇ ರೀತಿಯ ತೊಂದರೆ ಇಲ್ಲದೆ ಪಾರಾಗಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿ ಸಂಚರಿಸುತ್ತಿದ್ದವರು ಮೂಲತಃ ಹೊಸನಗರದವರಾಗಿದ್ದು ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೊಸನಗರಕ್ಕೆ ಬೇರೆ ವಾಹನದ ಮೂಲಕ ಸಚಿವರು ಕಳಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next