Advertisement

ಉಗ್ರಾಣಕ್ಕೆ ರಂಧ್ರ: ಕೇಸ್‌ ದಾಖಲು

12:45 PM Dec 08, 2021 | Team Udayavani |

ಚಿಂಚೋಳಿ: ತಾಲೂಕಿನ ಗಡಿಪ್ರದೇಶ ಕುಂಚಾವರಂ ಗ್ರಾಪಂ ಕಾರ್ಯಾಲಯಕ್ಕೆ ಹೊಂದಿಕೊಂಡಿರುವ ಉಗ್ರಾಣ ಕೋಣೆಗೆ ಯಂತ್ರದಿಂದ ದೊಡ್ಡ ರಂಧ್ರ ಕೊರೆದು ಹಾನಿ ಮಾಡಿದ ಆರೋಪದ ಮೇಲೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅ ಧಿಕಾರಿ, ಪಿಡಿಒ ಹಾಗೂ ವ್ಯಾಪಾರಿಯೊಬ್ಬರ ವಿರುದ್ಧ ಕುಂಚಾವರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ಇಂದಿರಾ ಪಾಟೀಲ ತಿಳಿಸಿದ್ದಾರೆ.

Advertisement

ಕುಂಚಾವರಂನ ಸಂದೀಪ ಬಕ್ಕಪ್ಪ ಎನ್ನುವಾತ ತನ್ನ ಸಿಹಿತಿಂಡಿಯ ವ್ಯಾಪಾರ, ವಹಿವಾಟು ನಡೆಸಲು ಗ್ರಾಪಂ ಮಳಿಗೆಯೊಂದನ್ನು ಬಾಡಿಗೆ ಪಡೆದುಕೊಂಡಿದ್ದರು. ಆದರೆ ಬಾಡಿಗೆ ನೀಡಿದ ಅಂಗಡಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ನೆಲಸಮವಾಗಿತ್ತು. ನಂತರ ಸಿಹಿತಿಂಡಿ ವ್ಯಾಪಾರಿ ಗ್ರಾಪಂ ಕಟ್ಟಡದಲ್ಲಿಯೇ ಮಳಿಗೆ ಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಗ್ರಾಪಂ ಸದಸ್ಯರು ಸಭೆ ನಡೆಸಿ, ಸಿಹಿತಿಂಡಿ ವ್ಯಾಪಾರಿಗೆ ಮಳಿಗೆ ನೀಡಬಾರದೆಂದು ವಿರೋಧ ವ್ಯಕ್ತಪಡಿಸಿ ನಿರ್ಣಯ ಅಂಗೀಕರಿಸಿದ್ದರು. ಆದರೂ ಅಂಗಡಿ ಆರಂಭಿಸುವ ಸಲುವಾಗಿ ಉಗ್ರಾಣ ಕೋಣೆಗೆ ಯಂತ್ರದ ಸಹಾಯದಿಂದ ರಂಧ್ರ ಕೊರೆಯಲಾಗಿತ್ತು. ಇದನ್ನು ಪ್ರಶ್ನಿಸಿದವರಿಗೆ ಜೀವ ಭಯ ಹಾಕಿದ್ದಾರೆ ಎಂದು ಪೋಚಾವರಂ ಗ್ರಾಮದ ಅಶೋಕ ಮಸಾನಿ ಕುಂಚಾವರಂ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಕುಂಚಾವರಂ ಪಿಎಸ್‌ಐ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next