Advertisement

Holalkere:ಕೃಷಿ ಹೊಂಡಕ್ಕೆ ಬಿದ್ದು ಬಾಲಕರಿಬ್ಬರ ಸಾವು

12:30 AM Mar 31, 2024 | Team Udayavani |

ಹೊಳಲ್ಕೆರೆ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಮೃತಪಟ್ಟ ಘಟನೆ ತಾಲೂಕಿನ ಶಿರಾಪನಹಳ್ಳಿಯಲ್ಲಿ ನಡೆದಿದೆ. 9ನೇ ತರಗತಿ ವಿದ್ಯಾರ್ಥಿ ಆರ್‌.ಅದಿತ್ಯ (15) ಹಾಗೂ 8ನೇ ತರಗತಿ ವಿದ್ಯಾರ್ಥಿ ಎಸ್‌.ಯರಗುಂಟೇಶ್ವರ (14) ಮೃತಪಟ್ಟವರು. ಶಿರಾಪನಹಳ್ಳಿಯ ರುದ್ರಪ್ಪ ಎಂಬವರು ತಮ್ಮ ಮನೆ ಪಕ್ಕದ ಅಡಕೆ ತೋಟಕ್ಕೆ ನೀರುಣಿಸಲು ಕೃಷಿ ಹೊಂಡ ನಿರ್ಮಿಸಿದ್ದರು. ಇದಕ್ಕೆ ಇಬ್ಬರು ಬಾಲಕರು ಈಜಾಡಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಚಿತ್ರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next