Advertisement

ತವರಿಗೆ ಮರಳಿದ ವಲಸೆ ಕಾರ್ಮಿಕರು

11:34 AM May 31, 2020 | Naveen |

ಹಿರಿಯೂರು: ಪಶ್ಚಿಮಬಂಗಾಳದ 83 ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತದ ಸೂಚನೆ ಮೇರೆಗೆ ತಾಲೂಕು ಆಡಳಿತ ಶನಿವಾರ ಬೆಳಗಿನ ಜಾವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 5 ಬಸ್‌ಗಳಲ್ಲಿ ಉಚಿತವಾಗಿ ಅವರ ತವರು ರಾಜ್ಯಕ್ಕೆ ಕಳುಹಿಸಿಕೊಟ್ಟಿತು.

Advertisement

ತಾಲೂಕಿನ ವಿವಿಧಡೆಗಳಲ್ಲಿ ಕಳೆದೆರೆಡು ವರ್ಷಗಳಿಂದ ಕೇಬಲ್‌ ಕೆಲಸಗಳನ್ನು ಮಾಡಿಕೊಂಡು ವಲಸೆ ಕಾರ್ಮಿಕರು ನೆಲೆಸಿದ್ದರು. ಕೋವಿಡ್ ಕಾರಣದಿಂದ ತಮ್ಮ ರಾಜ್ಯಕ್ಕೆ ಹೋಗಿರಲಿಲ್ಲ. ಈ ಬಗ್ಗೆ ಕಾರ್ಮಿಕರು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಜಿಲಾಡಳಿತದ ಆದೇಶದ ಮೇರೆಗೆ ಅವರ ಆರೋಗ್ಯ ತಪಾಸಣೆ ನಡೆಸಿ ವೈಯಕ್ತಿಕ ದಾಖಲಾತಿಗಳನ್ನು ಪರಿಶೀಲಿಸಲಾಯಿತು. ಇವರ ಜೊತೆಗೆ ಹೊಸ ದುರ್ಗ ತಾಲೂಕಿನ 28 ಕಾರ್ಮಿಕರನ್ನು ಕಳುಹಿಸಲಾಯಿತು. ತಹಶೀಲ್ದಾರ್‌ ಸತ್ಯನಾರಾಯಣ, ಸಿಪಿಐ ರಾಘವೇಂದ್ರ, ಹೊಸದುರ್ಗ ಪಿಎಸ್‌ಐ ಶಿವಕುಮಾರ್‌, ನಗರಠಾಣೆ ಪಿಎಸ್‌ಐ ನಾಗರಾಜ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next