Advertisement

ಮಂಗಳೂರಿನಲ್ಲಿ  ಹಿತ್‌ ಸ್ಟ್ರೀಕ್‌

06:00 AM May 05, 2018 | Team Udayavani |

ಮಂಗಳೂರು: ಜಿಂಬಾಬ್ವೆ ಕ್ರಿಕೆಟ್‌ ತಂಡದ ಮಾಜಿ ಕಪ್ತಾನ ಹಾಗೂ ಹಾಲಿ ತರಬೇತುದಾರ ಹಿತ್‌ ಸ್ಟ್ರೀಕ್‌ ಅವರು ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರು ವಿ.ವಿ. ಕಾಲೇಜಿನಲ್ಲಿ ಕರಾವಳಿ ಕ್ರಿಕೆಟ್‌ ಕ್ಲಬ್‌ ಆಶ್ರಯದಲ್ಲಿ ಈಗಾಗಲೇ ನಡೆಯುತ್ತಿರುವ ಮಕ್ಕಳ ಕ್ರಿಕೆಟ್‌ ತರಬೇತಿ ಕ್ರೀಡಾಂಗಣಕ್ಕೆ ಆಗಮಿಸಿ ಮಕ್ಕಳ ಜತೆಗೆ ಆಟವಾಡಿದರು. ಕ್ರಿಕೆಟ್‌ ಆಸಕ್ತ ಮಕ್ಕಳಿಗೆ ಕ್ರಿಕೆಟ್‌ನ ಕೆಲವು ವಿಚಾರಗಳ ಬಗ್ಗೆ ಅವರು ತಿಳಿಹೇಳಿದರು. ಕರಾವಳಿ ಕ್ರಿಕೆಟ್‌ ಕ್ಲಬ್‌ ಅಧ್ಯಕ್ಷ ಸಂತೋಷ್‌ ಮಿಸ್ಕಿತ್‌, ಮಂಗಳೂರು ವಿ.ವಿ. ಕಾಲೇಜಿನ ಪ್ರಾಂಶುಪಾಲರಾದ ಉದಯ್‌ ಕುಮಾರ್‌, ಪ್ರಮುಖರಾದ ಸಬಿತಾ ಮಿಸ್ಕಿತ್‌, ಜೋಸೆಫ್‌ ರೇಗೋ ಮೊದಲಾದವರು ಉಪಸ್ಥಿತರಿದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next