Advertisement

ಅರಂತೋಡು: ವಾಕಿಂಗ್ ಹೋಗುತ್ತಿದ್ದವನಿಗೆ ಕಾರು ಢಿಕ್ಕಿ; ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

01:48 PM Mar 01, 2022 | Team Udayavani |

ಅರಂತೋಡು: ಮಂಜಾನೆ ವಾಕಿಂಗ್  ಹೋಗುತ್ತಿದ್ದ ವ್ಯಕ್ತಿಗೆ ಕಾರೊಂದು ಗುದ್ದಿ ಗಂಭೀರ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಸಂಪಾಜೆಯ ಗಡಿಕಲ್ಲಿನಲ್ಲಿ ನಡೆದಿದೆ.

Advertisement

ಸರೋಜ್ ಕುಮಾರ್ ಮೃತ ದುರ್ಧೈವಿ ಎಂದು ತಿಳಿದು ಬಂದಿದೆ.

ಸರೋಜ್ ಕುಮಾರ್ ಬೆಳಿಗ್ಗೆ ವಾಕಿಂಗ್ ಎಂದು ತೆರಳಿದ್ದರು ಈ ಸಂಧರ್ಭದಲ್ಲಿ ಅಪರಿಚಿತ ವಾಹನವೊಂದು ಗಡಿಕಲ್ಲು ಬಳಿ ಗುದ್ದಿ ಪರಾರಿಯಾಗಿದೆ.  ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದಂತಹ ಸರೋಜ್ ಕುಮಾರ್ ಅವರನ್ನು ಕಲ್ಲುಗುಂಡಿಯಲ್ಲಿ ಯಕ್ಷಗಾನ ವೀಕ್ಷಿಸಲು ತೆರಳಿದ್ದವರು ಮಂಜಾನೆ ವೇಳೆ ಹಿಂದಿರುಗುತ್ತಿದ್ದಾಗ ನೋಡಿ ತಕ್ಷಣ ಆಸ್ಪತ್ರೆ ಸಾಗಿಸಲಾಗಿತ್ತು , ನಂತರ ಹೆಚ್ಚಿನ ಚಿಕಿತ್ಸೆ ಗೆಂದು ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸರೋಜ್ ಕುಮಾರ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಪೋಲಿಸರು ಭೆಟಿ ನೀಡಿದ್ದು ಸ್ಥಳ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next