Advertisement

ಕೋವಿಡ್ ಗೆದ್ದ ತಾಯಿ-ಮಗನಿಗೆ ಅದ್ಧೂರಿ ಸ್ವಾಗತ

03:37 PM Jul 02, 2020 | Naveen |

ಹಿರಿಯೂರು: ಕೋವಿಡ್ ವೈರಸ್‌ ಸೋಂಕು ಪೀಡಿತರಾಗಿ ಚಿಕಿತ್ಸೆ ಪಡೆದು ಗುಣಮುಖರಾದ ಇಲ್ಲಿನ ನಗರದ ಆಜಾದ್‌ ನಗರದ ತಾಯಿ ಮತ್ತು ಮಗನಿಗೆ ಬಡಾವಣೆಯ ನಾಗರಿಕರು ಅದ್ಧೂರಿ ಸ್ವಾಗತ ಕೋರಿ ಬರಮಾಡಿಕೊಂಡರು.

Advertisement

6ನೇ ವಾರ್ಡ್‌ನಲ್ಲಿರುವ ತಾಯಿ ಮತ್ತು ಮಗನಿಗೆ ಜೂ. 20 ರಂದು ಕೋವಿಡ್ ಧೃಢಪಟ್ಟಿತ್ತು. ಅವರನ್ನು ಚಿತ್ರದುರ್ಗ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಹದಿನೈದು ದಿನಗಳ ಕಾಲ ಚಿಕಿತ್ಸೆ ಪಡೆದು ಮತ್ತೆ ಪರೀಕ್ಷೆಗೆ ಒಳಗಾದಾಗ ವರದಿ ನೆಗೆಟಿವ್‌ ಆಗಿತ್ತು. ಹಾಗಾಗಿ ಆರೋಗ್ಯ ಇಲಾಖೆ ವತಿಯಿಂದ ಅವರನ್ನು ಕೋವಿಡ್ ಮುಕ್ತರೆಂದು ಘೋಷಿಸಿ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆವರೆಗೆ ಬಿಟ್ಟು ಹೋಗಲಾಯಿತು. ಗುಣಮುಖರಾಗಿ ಮನೆಗೆ ಮರಳಿ ಬಂದ ತಾಯಿ ಮತ್ತು ಮಗನನ್ನು ಆಜಾದ್‌ ನಗರದ ನಾಗರಿಕರು ಸ್ವಾಗತಿಸಿದರು.

ನಗರಸಭೆ ಸದಸ್ಯರಾದ ಇಮ್ತಿಯಾಜ್‌, ಅನಿಲ್‌ಕುಮಾರ್‌, ಮುಖಂಡರಾದ ಎ. ವಿಠ್ಠಲ, ಅಬೀದ್‌ ಹುಸೇನ್‌, ಧರ್ಮಗುರುಗಳಾದ ಅಬ್ದುಲ್‌ ಮೌಲಾನ, ಜಿ. ದಾದಾಪೀರ್‌, ಫಾರೂಕ್‌ ಸಾಬ್‌, ನಯಾಜ್‌, ಸೈಯ್ಯದ್‌ ಸಿಗ್ಬತ್‌ ಉಲ್ಲಾ, ಎಂ.ಡಿ. ಫಾರೂಕ್‌, ನವೀದ್‌, ನಯೀಮ್‌, ಲೈಹಿಕ್‌, ಹೀನಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next