Advertisement

ನೆರೆ ಸಂತ್ರಸ್ತರಿಗೆ ನೆರವಿನ ಮಹಾಪೂರ

01:41 PM Aug 17, 2019 | Team Udayavani |

ಹಿರಿಯೂರು: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲ್ಲಿ ನಿರಂತರ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಆ ಭಾಗದ ಜನರ ಬದುಕುಗಳು ಕೊಚ್ಚಿ ಹೋಗಿದೆ. ಸಂತ್ರಸ್ತರ ಬದುಕು ಕಟ್ಟಿಕೊಡಲು ಮಾನವೀಯತೆ ನೆಲೆಯಲ್ಲಿ ನಾವು, ನೀವೆಲ್ಲರೂ ಸಹಾಯ ಮಾಡೋಣ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್‌ ಹೇಳಿದರು.

Advertisement

ನಗರದ ಬೈಪಾಸ್‌ ರಸ್ತೆಯ ರಂಜಿತಾ ಹೋಟೆಲ್ ಸರ್ಕಲ್ನಿಂದ ನೆಹರೂ ಸರ್ಕಲ್ ವರೆಗೆ ಸಂಸದ ಎ.ನಾರಾಯಣಸ್ವಾಮಿ, ತಹಶೀಲ್ದಾರ್‌ ಜೆ.ಸಿ.ವೆಂಕಟೇಶಯ್ಯ, ನಗರಸಭೆ ಕಮಿಷನರ್‌ ಎಚ್.ಮಹಂತೇಶ್‌ ಅವರೊಂದಿಗೆ ತುಂತುರು ಮಳೆಯಲ್ಲೇ ಪಾದಯಾತ್ರೆ ನಡೆಸಿದ ಶಾಸಕರು, ನಗರದ ಪ್ರಧಾನ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರಸ್ಥರಿಂದ ನೆರೆ ಸಂತ್ರಸ್ತರಿಗೆ ದೇಣಿಗೆ ಮತ್ತು ಅಗತ್ಯ ಪರಿಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ನಗರದ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಶಕ್ತಿಗಣಪತಿ ಪೂಜಾ ಸಮಿತಿ ಮತ್ತು ವಾಣಿಜ್ಯೋದ್ಯಮಿಗಳಾದ ಕೆ.ಎಸ್‌. ಮಹಾಬಲೇಶ್ವರ ಶೆಟ್ಟಿ ಅವರು ಸಂಯುಕ್ತವಾಗಿ ಸುಮಾರು 120 ಸೊಲ್ಲಾಪುರ ಬೆಡ್‌ ಶೀಟ್‌ಗಳನ್ನು ನೀಡಿದರು.

ನಗರಸಭೆ ಮಾಜಿ ಅಧ್ಯಕ್ಷರು ಚಂದ್ರಶೇಖರ್‌, ಮಂಜುಳಾ, ನಗರಸಭೆ ಸದಸ್ಯರಾದ ಬಾಲಕೃಷ್ಣ, ಮಹೇಶ್‌ ಪಲ್ಲವ, ಸಿದ್ದನಾಯ್ಕ, ಬಿ.ಆರ್‌. ರಾಜಶೇಖರ್‌, ರೆಡ್‌ ಕ್ರಾಸ್‌ ಉಪಾಧ್ಯಕ್ಷ ಎಚ್.ಎಸ್‌.ಸುಂದರ್‌ರಾಜ್‌, ಮಹಾಬಲೇಶ್ವರಶೆಟ್ಟಿ, ಬಿ.ಕೆ.ನಾಗಣ್ಣ, ಎಂ.ಎಸ್‌.ರಾಘವೇಂದ್ರ, ಪಿ.ಆರ್‌.ಸತೀಶ್‌ ಬಾಬು, ಕೇಶವಮೂರ್ತಿ, ವೈ.ಎಸ್‌.ಉಮಾಶಂಕರ್‌, ತ್ರಯಂಭಕೇಶ್ವರ್‌ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next