Advertisement

ಹಿರಿಯಡಕ ದೇವಸ್ಥಾನ: ಗುಡಿಗಳ ನಿರ್ಮಾಣಕ್ಕೆ ಶಿಲಾನ್ಯಾಸ

03:45 AM Feb 09, 2017 | Team Udayavani |

ಹೆಬ್ರಿ: ಹಿರಿಯಡಕ ಮಹತೋಭಾರ ವೀರಭದ್ರಸ್ವಾಮಿ ದೇವಸ್ಥಾನದ ಕೆರೆ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ಬಿಡುಗಡೆಗೊಳಿಸಲು ಕ್ರಿಯಾ ಯೋಜನೆ ತಯಾರಿಸಿ ಸರಕಾರಕ್ಕೆ ನೀಡಿದ್ದು ಹಾಗೂ ಸುಸಜ್ಜಿತ ಸಭಾ ಭವನ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ಶೀಘ್ರವಾಗಿ ದೊರಕಿಸಿ ಕೊಡುವುದಾಗಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಶಾಸಕ ವಿನಯ
ಕುಮಾರ್‌ ಸೊರಕೆ ಹೇಳಿದರು.

Advertisement

ಅವರು ಬುಧವಾರ ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ದೇಗುಲದ ಆದಿಬ್ರಹ್ಮಸ್ಥಾನ ಹಾಗೂ ಪರಿವಾರ ದೈವಗಳ ಗುಡಿಗಳ ಕಾಮಗಾರಿಯ ಶಿಲಾನ್ಯಾಸ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಕುದಿ ವಸಂತ ಶೆಟ್ಟಿ ದೇವಸ್ಥಾನದ ಜೀರ್ಣೋದ್ಧಾರದ ಹಿನ್ನೋಟ ಹಾಗೂ ಮುನ್ನೋಟದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಚಾರ್ಟರ್ಡ್‌ ಬಿಲ್ಡರ್ನ ಬಾಲಕೃಷ್ಣ ಹೆಗ್ಡೆ, ಬೆಂಗಳೂರು ಎಂ.ಜಿ.ಆರ್‌. ಗ್ರೂಪ್‌ನ ಪ್ರಕಾಶ್‌ ಶೆಟ್ಟಿ, ಉದ್ಯಮಿ ಗುರ್ಮೆ ಸುರೇಶ್‌ ಶೆಟ್ಟಿ, ಹೊಟೇಲ್‌ ಉದ್ಯಮಿ ಬಿ. ಜಗನ್ನಾಥ ಶೆಟ್ಟಿ,, ಕಣಂಜಾರು ಶ್ರೀ ಮಹಾಲಿಂಗೇಶ್ವರ ದೇಗುಲದ ಮೊಕ್ತೇ
ಸರ ಸುಧೀರ್‌ ಹೆಗ್ಡೆ, ನಿವೃತ್ತ ಮುಖ್ಯ ಶಿಕ್ಷಕರಾದ ಪಡ್ಡಾಂ ಶೇಖರ್‌ ಶೆಟ್ಟಿ, ವಾಸು ಪ್ರಭು ನರ್ಜೆ, ಎಚ್‌. ಕೃಷ್ಣಮೂರ್ತಿ, ಸುಭಾಶ್ಚಂದ್ರ ಹೆಗ್ಡೆ, ಹರ್ಷವರ್ಧನ ಹೆಗ್ಡೆ, ಗೋವರ್ಧನದಾಸ್‌ ಹೆಗ್ಡೆ, ಅಮರನಾಥ್‌ ಶೆಟ್ಟಿ ಉಪಸ್ಥಿತರಿದ್ದರು.

ನಟರಾಜ್‌ ಹೆಗ್ಡೆ ಸ್ವಾಗತಿಸಿ, ಸಂತೋಷ್‌ ಶೆಟ್ಟಿ ಹಿರಿಯಡಕ ಕಾರ್ಯ ಕ್ರಮ ನಿರೂಪಿಸಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next