Advertisement

ಕೊವಿಡ್-19 ಸೋಂಕಿತ ಸಾವು ಶವಸಂಸ್ಕಾರಕ್ಕೆ ಹಿರೇಜಂತಗಲ್ ಜನರ ವಿರೋಧ

08:59 PM Jul 09, 2020 | Sriram |

ಗಂಗಾವತಿ: ಕೊವಿಡ್-19 ಸೋಂಕಿತ 51 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದು ಮೃತ ವ್ಯಕ್ತಿ ಶವಸಂಸ್ಕಾರ ಮಾಡಲು ಜಂತಗಲ್ ಗ್ರಾಮದ ಸ್ಮಶಾನದಲ್ಲಿ ಅವಕಾಶ ನೀಡುವುದಿಲ್ಲ ಎಂದು ವಾರ್ಡ್ ಜನರು ಅಂಬುಲೆನ್ಸ್ ಹೋಗುವ ದಾರಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಸ್ಥಳಕ್ಕೆ ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ ನಗರಠಾಣೆಯ ಪಿ ಐ ವೆಂಕಟಸ್ವಾಮಿ ನಗರಸಭೆ ಅಭಿಯಂತರ ನಾಗರಾಜಗೌಡ ಭೇಟಿ ನೀಡಿ ಜನರಿಗೆ ಮನವರಿಕೆ ಮಾಡಲು ಯತ್ನಿಸಿದರು.

ಕೊವಿಡ್-19 ರೋಗ ಸೋಂಕಿತ ವ್ಯಕ್ತಿಗಳು ಸಾವಿಗೀಡಾದ ಸಂದರ್ಭದಲ್ಲಿ ಸರಕಾರ ರೂಪಿಸಿರುವ ನಿಯಮಗಳಿಗನುಸಾರವಾಗಿ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸದೇ ತಾಲೂಕು ಆಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಶವಸಂಸ್ಕಾರ ಮಾಡಲಾಗುತ್ತದೆ ಎಂದು ಮನವರಿಕೆ ಮಾಡಿದರು.

ಸ್ಥಳೀಯರಿಂದ ಪ್ರತಿಭಟನೆ: ಜನವಸತಿ ಮಧ್ಯೆ ಸ್ಮಶಾನ ಇರುವುದರಿಂದ ಕೊವಿಡ್-19 ಸೋಂಕಿತ ವ್ಯಕ್ತಿಯ ಶವಸಂಸ್ಕಾರ ಹಿರೇಜಂತಗಲ್ ಸ್ಮಶಾನದಲ್ಲಿ ಮಾಡಬಾರದು ಇದರಿಂದ ಜನರಿಗೆ ತೊಂದರೆ ಆಗುತ್ತದೆ.

ಬೇರೆ ಎಲ್ಲಿಯಾದರೂ ದಫನ್ ಮಾಡುವಂತೆ ಸ್ಥಳೀಯರು ಪ್ರತಿಭಟನೆ ನಡೆಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next