Advertisement

ತಾಜ್‌ಮಹಲಲ್ಲಿ ಹಿಂದೂ ಯುವವಾಹಿನಿಯ ಶಿವಸ್ತುತಿ

07:10 AM Oct 25, 2017 | Team Udayavani |

ಆಗ್ರಾ: ತಾಜ್‌ ಮಹಲ್‌ ವಿವಾದಕ್ಕೆ ತುಪ್ಪ ಸುರಿಯುವಂತೆ ಹಿಂದೂ ಯುವ ವಾಹಿನಿ ಸಂಘಟನೆಯ ಕಾರ್ಯಕರ್ತರು ಮಂಗಳವಾರ ತಾಜ್‌ಮಹಲ್‌ ಪ್ರವೇಶಿಸಿ ಶಿವ ಸ್ತುತಿ ಹಾಡಿದ್ದಾರೆ. ಅಲ್ಲದೆ ತಾಜ್‌ಮಹಲ್‌ ಅನ್ನು ಶಿವನ ದೇವಾಲಯ ಎಂದು ಹೇಳಿರುವ ಅವರು, ಅದನ್ನು “ತೇಜೋ ಮಹಾಲಯ’ ಎಂದು ಕರೆದಿದ್ದಾರೆ.

Advertisement

ಈ ಸಂಘಟನೆಗೆ ರಾಷ್ಟ್ರ ಸ್ವಾಭಿಮಾನ ದಳ ಎಂಬ ಸಂಘಟನೆಯೂ ಕೈಜೋಡಿಸಿದೆ. ಇವರನ್ನು ತಡೆಯಲು ಪ್ರಯತ್ನಿಸಿದ ಭದ್ರತಾ ಸಿಬಂದಿಯೊಂದಿಗೆ ವಾಗ್ವಾದ ನಡೆಸಿದ ಕಾರ್ಯಕರ್ತರು, ತಾಜ್‌ ಮಹಲ್‌ ವೀಕ್ಷಣೆಗೆ ಆಗಮಿಸಿದ ಪ್ರವಾಸಿಗರನ್ನೂ ಬೆದರಿಸಿ ಓಡಿಸಿದ್ದಾರೆ ಎನ್ನಲಾಗಿದೆ. ನಂತರ ಇವರನ್ನು ಸಿಐಎಸ್‌ಎಫ್ ಸಿಬಂದಿ ಬಂಧಿಸಿ, ಠಾಣೆಗೆ ಕರೆದೊಯ್ದು ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಬಿಡುಗಡೆ ಮಾಡಿದ್ದಾರೆ. ಇದು ಶಿವನ ದೇಗುಲವಾಗಿತ್ತು. ಇದನ್ನು ತೇಜೋ ಮಹಾಲಯ ಎಂದು ಕರೆಯಬೇಕು. ಮೊಘಲರು ಹಲವು ದೇಗುಲಗಳನ್ನು ನಾಶ ಮಾಡಿದ್ದಾರೆ ಎಂದು ಹಿಂದೂ ಯುವ ವಾಹಿನಿ ಸಂಘಟನೆಯ ಮುಖಂಡ ದೀಪಕ್‌ ಶರ್ಮಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next