Advertisement

Canada; ಹಿಂದೂ ದೇವಾಲಯಕ್ಕೆ ದಾಳಿ: ಗೀಚುಬರಹದಿಂದ ವಿರೂಪ

12:54 PM Jul 23, 2024 | Team Udayavani |

ಎಡ್ಮಂಟನ್‌: ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ ಮಾಡಲಾಗಿದ್ದು, ಗೀಚುಬರಹದಿಂದ ವಿರೂಪಗೊಳಿಸಲಾಗಿದೆ.

Advertisement

ಘಟನೆ ಬಳಿಕ ಕೆನಡಾದ ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದ್ದು, ಬೆಳೆಯುತ್ತಿರುವ ಉಗ್ರಗಾಮಿ ಸಿದ್ಧಾಂತದ ವಿರುದ್ಧ ಕೆನಡಾ ಸರಕಾರವು ಉಗ್ರವಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದೆ.

“ವಿಎಚ್‌ಪಿ ಕೆನಡಾ ಎಡ್ಮಂಟನ್‌ನಲ್ಲಿರುವ BAPS ಮಂದಿರದಲ್ಲಿ ಹಿಂದೂ ವಿರೋಧಿ ಗೀಚುಬರಹ ಮತ್ತು ವಿಧ್ವಂಸಕತೆಯನ್ನು ಬಲವಾಗಿ ಖಂಡಿಸುತ್ತದೆ. ಶಾಂತಿಯನ್ನು ಪ್ರೀತಿಸುವ ಹಿಂದೂ ಸಮುದಾಯದ ವಿರುದ್ಧ ದ್ವೇಷವನ್ನು ಪ್ರಚೋದಿಸುವ ಬೆಳೆಯುತ್ತಿರುವ ಉಗ್ರಗಾಮಿ ಸಿದ್ಧಾಂತದ ವಿರುದ್ಧ ನಿರ್ಣಾಯಕವಾಗಿ ಕಾರ್ಯನಿರ್ವಹಿಸಲು ಕೆನಡಾದ ಎಲ್ಲಾ ಹಂತದ ಸರ್ಕಾರಗಳನ್ನು ನಾವು ಒತ್ತಾಯಿಸುತ್ತೇವೆ” ಎಂದು ಎಕ್ಸ್ ಪೋಸ್ಟ್‌ನಲ್ಲಿ ಬರೆದಿದೆ.

ಇತ್ತೀಚೆಗಷ್ಟೇ ಖಲಿಸ್ಥಾನಿ ಪ್ರತ್ಯೇಕತಾವಾದಿಗಳಿಂದ ದೇವಾಲಯವೊಂದರ ಮೇಲೆ ಇಂತಹ ಗೋಡೆ ಬರಹಗಳಿಂದ ವಿರೂಪಗೊಳಿಸಲಾಗಿತ್ತು. ಖಲಿಸ್ಥಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ನಂತರ ಖಲಿಸ್ಥಾನ್ ಬೆಂಬಲಿಗರು ತಮ್ಮ ಭಾರತ ವಿರೋಧಿ ಚಟುವಟಿಕೆಗಳನ್ನು ಹೆಚ್ಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next