Advertisement

ನ್ಯಾಯಕ್ಕಾಗಿ ಮತಾಂತರವಾಗಿ: ತಲಾಖ್‌ ಸಂತ್ರಸ್ತೆಯರಿಗೆ ಹಿಂದೂ ಮಹಾಸಭಾ

02:57 PM Apr 14, 2017 | |

ಹೊಸದಿಲ್ಲಿ: ಇಸ್ಲಾಂನಲ್ಲಿರುವ ತ್ರಿವಳಿ ತಲಾಖ್‌ ನಿಷೇಧ, ನಿಖಾ ಹಲಾಲಾ ಮತ್ತು ಬಹುಪತ್ನಿತ್ವದ ಕುರಿತಾಗಿ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ವೇಳೆಯಲ್ಲೇ ಶರಿಯಾ ಕಾನೂನಿನ ಪ್ರಕಾರ ಸಂತ್ರಸ್ತೆಯರಾದ ಮಹಿಳೆಯರಿಗೆ ಮತಾಂತರ ಹೊಂದಲು ಹಿಂದೂ ಮಹಾ ಸಭಾ ಮನವಿ ಮಾಡಿದೆ. 

Advertisement

‘ಕಾನೂನು ನಿಮಗೆ ಸಹಾಯ ಮಾಡಲು ಸಾಧ್ಯವಾಗದೆ ಇದ್ದರೆ ಅಥವಾ ಏಕರೂಪದ ಪೌರ ವ್ಯವಸ್ಥೆ ಕಾರ್ಯಗತಗೊಳಿಸಲು ವಿಫಲವಾದಲ್ಲಿ, ಸಂತ್ರಸ್ತೆಯನಿಸಿಕೊಂಡಿರುವ ಮಹಿಳೆಯರಿಗೆ ಹಿಂದೂ ಧರ್ಮಕ್ಕೆ ಸ್ವಾಗತ’ ಎಂದು ಹಿಂದೂ ಮಹಾ ಸಭಾ ಪ್ರಧಾನ ಕಾರ್ಯದರ್ಶಿ ಡಾ.ಪೂಜಾ ಶಕುನ್‌ ಪಾಂಡೆ ಹೇಳಿದ್ದಾರೆ.

‘ನೀವು ಬಂದು ಹಿಂದೂ ಧರ್ಮ ಸ್ವೀಕರಿಸಿದರೆ ನಾನು ಸಂತೋಷದಿಂದ ನಿಮ್ಮ ಮದುವೆಯನ್ನು ಏರ್ಪಡಿಸಿ ಕನ್ಯಾದಾನ ವನ್ನು ನಾನು  ನೆರವೇರಿಸುತ್ತೇನೆ’ ಎಂದು ಪಾಂಡೆ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next