Advertisement

ಬಿಗಿ ಬಂದೋಬಸ್ತ್ನಲ್ಲಿ ಹಿಂದೂ ಕ್ಷಾತ್ರ ಸಮಾವೇಶ

03:37 PM Apr 26, 2017 | Team Udayavani |

ಜೇವರ್ಗಿ: ಶ್ರೀರಾಮಸೇನಾ ತಾಲೂಕು ಘಟಕದ ವತಿಯಿಂದ ಶ್ರೀ ರಾಮನವಮಿ ನಿಮಿತ್ತ ಏ.26 ರಂದು ಪಟ್ಟಣದಲ್ಲಿ ನಡೆಯಲಿರುವ ಹಿಂದೂ ಕ್ಷಾತ್ರ ಸಮಾವೇಶ ಹಾಗೂ ಬೃಹತ್‌ ಶೋಭಾ ಯಾತ್ರೆಗೆ ಪೊಲೀಸ್‌ ಬಿಗಿ ಬಂದೋಬಸ್ತ್ ಒದಗಿಸಲಾಗುತ್ತಿದೆ. 

Advertisement

ಪಟ್ಟಣದಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವ ಶ್ರೀರಾಮನವಮಿ ಹಾಗೂ ಹನುಮಾನ ಜಯಂತ್ಯುತ್ಸವ ನಿಮಿತ್ತ ಕ್ಷಾತ್ರ ಸಮಾವೇಶಕ್ಕೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ ಮುತ್ತಾಲಿಕ ಆಗಮಿಸುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗುತ್ತಿದೆ. 

ಕಳೆದ ತಿಂಗಳು ಫೇಸ್‌ಬುಕ್‌ನಲ್ಲಿ ಧಾರ್ಮಿಕ ಸ್ಥಳವೊಂದರ ಮೇಲೆ ಅಶ್ಲೀಲ ಚಿತ್ರ ಪೋಸ್ಟ್‌ ಮಾಡಿರುವ ಘಟನೆ ಹಾಗೂ ಶ್ರೀರಾಮಸೇನೆ ತಾಲೂಕು ಘಟಕದ ಅಧ್ಯಕ್ಷರ ಮನೆ ಮೇಲೆ ಕಿಡಿಗೇಡಿಗಳ ದಾಳಿ ಘಟನೆ ನಂತರ ಜೇವರ್ಗಿಯನ್ನು ಅತೀ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ.

ಸೋಮವಾರ ಟಿಪ್ಪು ಸುಲ್ತಾನ ಸಮಿತಿ ಮುಖಂಡರು ಶೋಭಾಯಾತ್ರೆಗೆ ಅನುಮತಿ ನೀಡಬಾರದೆಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಗ್ರಾಮೀಣ ಉಪವಿಭಾಗದ ಡಿವೈಎಸ್ಪಿ ಎಸ್‌.ಎಸ್‌. ಹುಲ್ಲೂರ ನೇತೃತ್ವದಲ್ಲಿ ಎರಡು ಸಮುದಾಯದ ಮುಖಂಡರ ಜೊತೆ ಪ್ರತ್ಯೇಕ ಶಾಂತಿ ಸಭೆ ನಡೆಸಿ ಸಮಾವೇಶಕ್ಕೆ ಯಾವುದೇ ಅಡೆತಡೆ ಉಂಟು ಮಾಡಬಾರದು. 

ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡದಂತೆ ಎರಡು ಸಮುದಾಯದ ಮುಖಂಡರಿಗೆ ಮನವಿ ಮಾಡಿದ್ದಾರೆ. ಅಲ್ಲದೆ ಮಂಗಳವಾರ ಭೇಟಿ ನೀಡಿದ ಎಸ್ಪಿ ಶಶಿಕುಮಾರ  ಪಟ್ಟಣದಲ್ಲಿ ಶಾಂತಿ ಕದಡದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. 

Advertisement

ಕ್ಷಾತ್ರ ಸಮಾವೇಶ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಕೇಸರಿ ಧ್ವಜ, ಬಂಟಿಂಗ್ಸ್‌, ಬ್ಯಾನರ್‌, ಕಟೌಟ್‌ಗಳು ರಾರಾಜಿಸುತ್ತಿವೆ. ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಸಮಾವೇಶ ಜರುಗಲಿದ್ದು, 10 ಸಾವಿರಕ್ಕೂ ಅಧಿಧಿಕ ಜನಸೇರುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. 

ಮೂವರು ಡಿವೈಎಸ್ಪಿ, ಎಂಟು ಜನ ಸಿಪಿಐ, 15 ಪಿಎಸ್‌ಐ, 60 ಎಎಸ್‌ಐ, 200 ಪೊಲೀಸ್‌ ಪೇದೆ, ನಾಲ್ವರು ಡಿಎಆರ್‌, ಇಬ್ಬರು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗುತ್ತಿದೆ ಎಂದು ಗ್ರಾಮೀಣ ಉಪವಿಭಾಗದ ಡಿವೈಎಸ್ಪಿ ಎಸ್‌.ಎಸ್‌. ಹುಲ್ಲೂರ ತಿಳಿಸಿದ್ದಾರೆ.

ಮೆರವಣಿಗೆ ಪ್ರಾರಂಭವಾಗುವ ಷಣ್ಮುಖ ಶಿವಯೋಗಿ ಮಠದಿಂದ ಪದವಿ ಪೂರ್ವ ಕಾಲೇಜಿನ ವರೆಗೆ ಪಿಕೇಟಿಂಗ್‌, ಬ್ಯಾರಿಕೇಡ್‌, ಫಿಕ್ಸ್‌ ಪಾಯಿಂಟ್‌ಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next