Advertisement

ಹಿಂದಿ ಟೀಕಿಸುವ ಭರದಲ್ಲಿ ಡಿಎಂಕೆ ಸಂಸದ ಎಡವಟ್ಟು

07:20 AM Jun 07, 2022 | Team Udayavani |

ಚೆನ್ನೈ: ಹಿಂದಿ ಹೇರಿಕೆ ವಿರುದ್ಧ ಮಾತನಾಡುವ ರಭಸದಲ್ಲಿ ಡಿಎಂಕೆ ರಾಜ್ಯಸಭಾ ಸದಸ್ಯ ಟಿ.ಕೆ.ಎಸ್‌.ಇಳಂಗೋವನ್‌ ಎಡವಟ್ಟು ಮಾಡಿಕೊಂಡಿದ್ದಾರೆ.

Advertisement

“ಹಿಂದಿ ಭಾಷೆ ಹೇರಿಕೆಯಿಂದಾಗಿ ತಮಿಳರು ಶೂದ್ರರ ಮಟ್ಟಕ್ಕೆ ಇಳಿಯಲಿದ್ದಾರೆ’ ಎಂದಿದ್ದಾರೆ. ಜತೆಗೆ ಆ ಭಾಷೆಯನ್ನು ಮಾತನಾ ಡುವ ರಾಜ್ಯ ಗಳು ಅಭಿವೃದ್ಧಿ ಸಾಧಿಸಿಲ್ಲ ಎಂದು ಪ್ರತಿಪಾದಿ ಸಿದ್ದಾರೆ.

“ಹಿಂದಿಯೇ ಪ್ರಧಾನ ಭಾಷೆ ಆಗಿಲ್ಲದ ಪಶ್ಚಿಮ ಬಂಗಾಲ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್‌ ಬೆಳವಣಿಗೆ ಸಾಧಿಸಿವೆ. ಈ ಎಲ್ಲ ರಾಜ್ಯಗಳಲ್ಲಿ ಹಿಂದಿ ಮಾತೃಭಾಷೆ ಆಗಿಲ್ಲ ಎಂದು ಪ್ರತಿಪಾದಿಸುವುದೇ ನನ್ನ ಉದ್ದೇಶ.

ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮತ್ತು ಉತ್ತರಾಖಂಡ ಹಿಂದಿ ಭಾಷೆ ಮಾತನಾಡುವ ರಾಜ್ಯಗಳು. ಅವುಗಳು ಅಭಿವೃದ್ಧಿಯಾಗಿಲ್ಲ. ಹೀಗಾಗಿ, ನಾನೇಕೆ ಆ ಭಾಷೆಯನ್ನು ಕಲಿಯಬೇಕು’ ಎಂದು ಪ್ರಶ್ನಿಸಿದ್ದಾರೆ.

ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಳಂಗೋವನ್‌ ಅವರ ಹೇಳಿಕೆಯು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ವೈಷಮ್ಯ ಹುಟ್ಟಿಸುವಂತಿದೆ ಎಂದು ಆಕ್ರೋಶ ಹೊರಹಾಕಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next