Advertisement

ಕೋಟ್ಯಂತರ ಹಿಂದುಗಳ ಕನಸು ನನಸು : ಶಾಸಕ ವೆಂಕಟರೆಡ್ಡಿ ಮದ್ನಾಳ

10:51 AM Aug 06, 2020 | sudhir |

ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸುವ ಮೂಲಕ ಸುಮಾರು 500 ವರ್ಷಗಳ ಇತಿಹಾಸದ ಕೋಟ್ಯಂತರ ಹಿಂದುಗಳ ಕನಸು ನನಸಾಗಿದೆ ಎಂದು ಶಾಸಕ ವೆಂಕಟರೆಡ್ಡಿ ಮದ್ನಾಳ ಅಭಿಪ್ರಾಯಪಟ್ಟರು.

Advertisement

ನಗರದ ಶಾಸಕರ ಸಾರ್ವಜನಿಕ ಸಂಪರ್ಕ ಕಚೇರಿ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ, ಮುಖಂಡರಾದ ಶರಣಗೌಡ ಬಾಡಿಯಾಲ, ಮಹಾದೇವಪ್ಪ ಯಲಸತ್ತಿ, ಖಂಡಪ್ಪ ದಾಸನ, ಹಣಮಂತ ಇಟಗಿ, ವಿಲಾಸ ಪಾಟೀಲ್‌, ಸ್ವಾಮಿದೇವ ದಾಸನಕೇರಿ, ಪರಶುರಾಮ  ಕುರಕುಂದಿ, ಮಾರುತಿ ಕಲಾಲ್‌, ಸುರೇಶ ಅಂಬಿಗೇರ, ನಾಗಪ್ಪ ಬೆನಕಲ್‌ ಇದ್ದರು.

ಯಾದಗಿರಿ: ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸುವ ವೇಳೆಗೆ
ನಗರದ ಗಂಜ್‌ ಆವರಣದಲ್ಲಿರುವ ವೀರಾಂಜನೇಯ ದೇವಸ್ಥಾನದಲ್ಲಿ ಶ್ರೀರಾಮ ಸೇನೆಯ ಜಿಲ್ಲಾ ಘಟಕದಿಂದ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು. ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವಿಜಯ ಪಾಟೀಲ್‌, ಶಶಾಂಕ ನಾಯಕ, ಸಂದೀಪ ಮಹೇಂದ್ರಕರ್‌, ಹಣಮಂತ್ರಾಯ ಪಾಟೀಲ್‌ ರಘುರಾಮ್‌, ಸುಭಾಷ ದೇವದುರ್ಗ, ಸಂತೋಷ ಮಗ್ಗಾ, ರಾಕೇಶ ನಾಯಕ,
ಪವನ ನಾಯಕ, ಆಕಾಶ ಚವ್ಹಾಣ, ಭೀಮು ನಾಯಕ, ಸುರೇಶ ರಾಯಚೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next