Advertisement

Hill Collapse; ಚಾಲಕ ಅರ್ಜುನ್‌ ಸಿಗುವವರೆಗೆ ಕಾರ್ಯಾಚರಣೆ ಸ್ಥಗಿತ ಬೇಡ: ಕೇರಳ ಮುಖ್ಯಮಂತ್ರಿ

12:42 AM Jul 29, 2024 | Team Udayavani |

ತಿರುವನಂತಪುರ: ಶಿರೂರು ಗುಡ್ಡ ಕುಸಿತ ಕಾರ್ಯಾಚರಣೆ ಸ್ಥಗಿತಗೊಳಿಸಲು ಕರ್ನಾಟಕ ತೀರ್ಮಾನಿಸಿ ರುವ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅದನ್ನು ಮುಂದು ವರಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಈ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಲಾರಿ ಚಾಲಕ ಅರ್ಜುನ್‌ ಸಿಗುವವರೆಗೆ ಶೋಧ ಮುಂದುವರಿಸಬೇಕು. ಅದರಲ್ಲಿ ಸಕಾರಾತ್ಮಕ ಫ‌ಲಿತಾಂಶ ದೊರೆಯುವವರೆಗೂ ಸ್ಥಗಿತಗೊಳಿಸಬಾರದು’ ಎಂದಿದ್ದಾರೆ. ಕಾರ್ಯಾಚರಣೆಗೆ ಅಗತ್ಯವಾಗಿರುವ ಆಧುನಿಕ ಉಪಕರಣಗಳನ್ನು ಬಳಸಿಕೊಳ್ಳು ವಂತೆ ಸಲಹೆ ನೀಡಿದ್ದಾರೆ.

ಇದುವರೆಗೆ ಕೈಗೊಂಡಿರುವ ಕಾರ್ಯಾಚರಣೆಯಲ್ಲಿ ವ್ಯತ್ಯಯ ಆಗಿಲ್ಲ. ಎಲ್ಲವೂ ಸಕಾರಾತ್ಮಕವಾಗಿಯೇ ನಡೆದಿದೆ ಎಂದು ಕರ್ನಾಟಕ ಸರಕಾರ ನಡೆಸಿದ್ದ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next