Advertisement

ಗುಡ್ಡ ಕುಸಿತ: ಕೆಸರು ಗದ್ದೆಯಂತಾಗಿರುವ ಆಗುಂಬೆ ಘಾಟಿ ರಸ್ತೆ

07:19 PM Aug 22, 2022 | Team Udayavani |

ತೀರ್ಥಹಳ್ಳಿ: ಆಗುಂಬೆ ಘಾಟಿಯಲ್ಲಿ ಮಳೆಗಾಲ ಆರಂಭಗೊಂಡಾಗಿನಿಂದ ಗುಡ್ಡ ಕುಸಿತ ಸಂಭವಿಸುತ್ತಿದ್ದು, ಭಾನುವಾರ ಘಾಟಿಯ ಸೂರ್ಯಾಸ್ತಮಾನ ಪ್ಲಾಟ್ ಫಾರ್ಮ್ ಬಳಿ ಮತ್ತೆ ಭೂಕುಸಿತ ಉಂಟಾಗಿ ರಸ್ತೆ ಕೆಸರು ಗದ್ದೆಯಂತಾಗಿದೆ.

Advertisement

ಗುಡ್ಡ ಜರಿದ ಪರಿಣಾಮವಾಗಿ ಮರಗಿಡಗಳು ರಸ್ತೆ ಮೇಲೆ ಬಿದ್ದಿದ್ದು, ಅರಣ್ಯ ಇಲಾಖೆಯವರು ವಾಹನ ಸಂಚಾರಕ್ಕೆ ಅನುವಾಗುವಂತೆ ಮರಗಳನ್ನು ತೆರವುಗೊಳಿಸಿದ್ದಾರೆ.ಆದರೆ ಗುಡ್ಡದ ಮಣ್ಣು ರಸ್ತೆ ಮೇಲೆ ರಾಶಿ ಬಿದ್ದಿದೆ.

ಸತತವಾಗಿ ಮಳೆಯೂ ಸುರಿಯುತ್ತಿರುವ ಕಾರಣ ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲಿ ವಾಹನಗಳ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ಅಗತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next