Advertisement

ಯಾನಾಗುಂದಿ ಮಾಣಿಕೇಶ್ವರಿ ಆಶ್ರಮಕ್ಕೆ ಪಾದಯಾತ್ರೆ

03:39 PM Mar 20, 2022 | Team Udayavani |

ಗುರುಮಠಕಲ್‌: ತಾಲೂಕಿನ ಮಾತಾ ಮಾಣಿಕೇಶ್ವರಿ ಭಕ್ತರು ಮಾತಾಜಿ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ಪಾದಯಾತ್ರೆ ನಡೆಸಿದರು.

Advertisement

ಪಟ್ಟಣದ ಖಾಸಾಮಠದಿಂದ ಯಾನಗುಂದಿಯ ಮಾತಾ ಮಾಣಿಕೇಶ್ವರಿ ಆಶ್ರಮದವರೆಗೆ ಪಾದಯಾತ್ರೆ ನಡೆಸಿದರು.

ದಾರಿಯುದ್ದಕ್ಕೂ ಓಂ ನಮೋ ಶಿವಾಯ ಎಂಬ ಪಂಚಾಕ್ಷರಿ ಮಂತ್ರ ಪಠಿಸುತ್ತ ಪಾದಯಾತ್ರೆ ಮಾಡಿದರು. ದಾರಿಯಲ್ಲಿ ಪಾದಯಾತ್ರೆ ಮಾಡುತ್ತಿದ್ದ ಭಕ್ತರಿಗೆ ಕೆಲ ದಾನಿಗಳು ನೀರು ಮತ್ತು ಬಾಳೆ ಹಣ್ಣು ಉಚಿತವಾಗಿ ವಿತರಿಸಿದರು.

ಪುರಸಭೆ ಸದಸ್ಯರಾದ ಪಾಪಣ್ಣ ಮನ್ನೆ, ಅಶೋಕ ಸಂಜನೋಳ್‌, ವೀರಪ್ಪ ಪ್ಯಾಟಿ, ನರಸರೆಡ್ಡಿ ಗಡ್ಡೆಸೂಗೂರ್‌, ವಿಜಯಕುಮಾರ ನಿರೇಟಿ, ಲಾಲಪ್ಪ ಕಂದೂರ್‌, ಜ್ಞಾನೇಶ್ವರರೆಡ್ಡಿ, ಕಾಶಪ್ಪ ಮನ್ನೆ, ಶರಣು ಧರ್ಮಪೂರ್‌, ಶಿವುಕುಮಾರ ಕಡೇಚೂರ್‌, ನಾರಾಯಣ ಶಿರ್ರಾ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next