Advertisement

ಡಾ. ಬಾಬು ಜಗಜೀವನ್ ರಾಮ್ ವೃತ್ತದ ಗೇಟ್ ಧ್ವಂಸ: ಹೆದ್ದಾರಿ ತಡೆದು ಪ್ರತಿಭಟನೆ

03:14 PM Oct 30, 2020 | keerthan |

ಕೊಪ್ಪಳ: ಇಲ್ಲಿನ ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿ ಇರುವ ಡಾ.‌ಬಾಬು ಜಗಜೀವನ್ ರಾಮ್ ವೃತ್ತದ ಗೇಟ್ ದ್ವಂಸ ಘಟನೆ ಖಂಡಿಸಿ ಪರಿಶಿಷ್ಟ ವರ್ಗದ ಮುಖಂಡರು ನಗರದ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

Advertisement

ವೃತ್ತದ ಗೇಟ್ ಅನ್ನು ಉದ್ದೇಶಪೂರ್ವಕವಾಗಿ ಮುರಿಯಲಾಗಿದೆ. ಮೊದಲು ಈ ವೃತ್ತ ತೆರವು ಮಾಡುವ ಯತ್ನ ನಡೆದಿದ್ದವು. ಹಿಂದೆ ಜಿಲ್ಲಾಧಿಕಾರಿಯವರು ಈ ವಿವಾದ ಬಗೆ ಹರಿಸಿದ್ದರು. ಈಗ ಮತ್ತೆ ಕೆಲವರು ವೃತ್ತ ತೆರವು ಮಾಡುವ ಪ್ರಯತ್ನ ಕ್ಕೆ ಮುಂದಾಗಿ ಮೊದಲು ಗೇಟ್ ದ್ವಂಸ ಮಾಡಿದ್ದಾರೆ. ದ್ವಂಸದಲ್ಲಿ ಭಾಗಿಯಾದ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ವೃತ್ತಕ್ಕೆ ರಕ್ಷಣೆಯ ಜೊತೆಗೆ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿ ವೃತ್ತಕ್ಕೆ ಹೊಂದಿಕೊಂಡಂತೆ ಇರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ:ಬಾಬು ಜಗಜೀವನ್ ರಾಮ್ ವೃತ್ತದ ಗೇಟ್ ಧ್ವಂಸ: ಆಕ್ರೋಶ

ಪ್ರತಿಭಟನೆಯಲ್ಲಿ ಗಾಳೆಪ್ಪ, ರಾಮಣ್ಣ, ಹನುಮೇಶ ಕಡೆಮನಿ ಸೇರಿ ಇತರೆ ಮುಖಂಡರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next