Advertisement

ಕೊನೆಗೂ ಹೆದ್ದಾರಿಯಿಂದ ನಗರ ಪ್ರವೇಶಕ್ಕೆ ಕಾಮಗಾರಿ

10:07 AM Apr 15, 2022 | Team Udayavani |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಿಂದ ನಗರಕ್ಕೆ ಪ್ರವೇಶ ಕಲ್ಪಿಸಲು ಕೊನೆಗೂ ಮುಹೂರ್ತ ಕೂಡಿಬಂದಿದೆ. ಗುರುವಾರ ಈ ಕಾಮಗಾರಿಗೆ ಚಾಲನೆ ದೊರೆತಿದೆ. ಸಹಾಯಕ ಕಮಿಷನರ್‌ ಕೆ.ರಾಜು, ಡಿವೈಎಸ್‌ಪಿ ಕೆ. ಶ್ರೀಕಾಂತ್‌, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹಾಗೂ ನವಯುಗ ಸಂಸ್ಥೆಯ ಪ್ರತಿನಿಧಿಗಳು ಹಾಜರಿದ್ದರು.

Advertisement

ಅಗತ್ಯವುಳ್ಳ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಬಳಿಕವಷ್ಟೇ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಎಸಿ ತಿಳಿಸಿದರು.

ಬಾರಿಕೇಡ್‌ ಇಡುವುದು, ವಾಹನದ ವೇಗ ತಗ್ಗಿಸಲು ಬೇಕಾದ ಏರ್ಪಾಟುಗಳು, ಮಿಣುಕು ದೀಪಗಳ ಅಳವಡಿಕೆ, ಫ‌ಲಕಗಳ ಅಳವಡಿಕೆ ಬಳಿಕವೇ ವಾಹನ ಬಿಡಬೇಕು ಎಂದು ಡಿವೈಎಪಿ ಸೂಚಿಸಿದರು.

ಜೆಸಿಬಿ ಹಾಗೂ ಕಬ್ಬಿಣ ಕತ್ತರಿಸುವ ಯಂತ್ರಗಳ ಮೂಲಕ ತಡೆಬೇಲಿ ತೆಗೆದು ಹೆದ್ದಾರಿಯಿಂದ ಸರ್ವಿಸ್‌ ರಸ್ತೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಕಾಮಗಾರಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next