Advertisement

ಉಚ್ಛಾಯ ಮಹೋತ್ಸವ ಸಂಪನ್ನ

12:08 PM Dec 15, 2021 | Team Udayavani |

ನಾಗರಹಾಳ: ಬೊಮ್ಮನಾಳ ಗ್ರಾಮದ ಆರಾಧ್ಯ ದೈವ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಉಚ್ಛಾಯ ಮಹೋತ್ಸವ ಮಂಗಳವಾರ ಸಂಭ್ರಮದಿಂದ ಜರುಗಿತು.

Advertisement

ಜಾತ್ರೆ ನಿಮಿತ್ತ ಕಳೆದ 15 ದಿನಗಳಿಂದ ಬೀರಲಿಂಗೇಶ್ವರ ದೇವರ ಕುರಿತು ಕೊಮನೂರಿನ ನಾಗಭೂಷಣ ಹಿರೇಮಠ ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

ಮಂಗಳವಾರ ಬೆಳಗಿನ ಜಾವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು. ನಂತರ ಗೋಪುರಕ್ಕೆ ಕಳಸಾರೋಹಣ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಕಾಯಿ-ಕರ್ಪೂರ, ಮುಡಿಪು, ದೀಡ್‌ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಸಂಜೆ 6 ಗಂಟೆಗೆ ಉಚ್ಛಾಯ ಮಹೋತ್ಸವ ಜರುಗಿತು. ಬಯ್ನಾಪೂರ, ಬೊಗಾಪೂರ, ಸುಂಕಾಪೂರ, ಆಶಿಹಾಳ, ಕಿಲಾರಹಟ್ಟಿ, ಲೆಕ್ಕಿಹಾಳ ಗ್ರಾಮಗಳ ಭಕ್ತರು ತಂಡೋಪ ತಂಡವಾಗಿ ಬಂದು ದೇವರ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next