Advertisement

Raichur: ಮತ‌ ಮಗಳಿದ್ದಂತೆ ಮಾರಿಕೊಳ್ಳಬೇಡಿ; ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಜಾಗೃತಿ

07:14 PM Apr 10, 2024 | Team Udayavani |

ರಾಯಚೂರು: ಮತ ಮಗಳಿದ್ದಂತೆ. ಅದನ್ನು ಹಣಕ್ಕಾಗಿ ಮಾರಿಕೊಳ್ಳಬೇಡಿ. ಈ ರೀತಿ ಸಂದೇಶವನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸುವ ಮೂಲಕ ಇಲ್ಲಿನ ಕುಟುಂಬವೊಂದು ಜಾಗೃತಿ ಮೂಡಿಸುತ್ತಿದೆ.

Advertisement

ಈ ಸಂದೇಶವನ್ನು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರಾಹುಲ ತುಕಾರಾಂ ಪಾಂಡ್ವೆ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

ಮಾನ್ವಿ ತಾಲೂಕಿನ ಅರೋಲಿ ಗ್ರಾಮದ ಚನ್ನಬಸವ ಜತೆ ಪಲ್ಲವಿ ಮದುವೆ ಇದೇ ಏ.22ರಂದು ನಿಶ್ಚಯವಾಗಿದೆ. ಆಮಂತ್ರಣ ಪತ್ರಿಕೆಯ ಕೆಳಗೆ ಮತದಾನ ಮಗಳಿದ್ದಂತೆ ಮಗಳನ್ನು (ಮತವನ್ನು) ಹಣಕ್ಕಾಗಿ ಮಾರಿಕೊಳ್ಳಬೇಡಿ.  ಜಾಗ್ರತೆಯಿಂದ ಮತ ಚಲಾಯಿಸಿ ಎಂಬ ಸಂದೇಶ ಪ್ರಕಟಿಸಿರುವುದು ಗಮನ ಸೆಳೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next