Advertisement

ಮತಕ್ಷೇತ್ರದ ಅಭಿವೃದ್ಧಿಗೆ ಅತಿ ಹೆಚ್ಚು ಅನುದಾನ: ಸಾಸನೂರ

06:38 PM Sep 19, 2022 | Nagendra Trasi |

ತಾಳಿಕೋಟೆ: ದೇವರಹಿಪ್ಪರಗಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಕೋನದಿಂದ ಕೆಲಸಗಳನ್ನು ಮಾಡುತ್ತ ಬಂದಿದ್ದೇನೆ ಅದರಂತೆ ಕುಡಿಯುವ ನೀರು, ಗ್ರಾಮೀಣ ರಸ್ತೆ, ನೀರಾವರಿ ಯೋಜನೆಗಳಿಗೆ ಒತ್ತು ನೀಡಿದ್ದೇನೆಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.

Advertisement

ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಉಪ ವಿಭಾಗ ಮುದ್ದೇಬಿಹಾಳ 2021-22ನೇ ಲೆಕ್ಕ ಶಿರ್ಷಿಕೆ 5054 ಅಂಪೇಂಡಿಕ್ಸ್‌-ಇ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ ತಾಳಿಕೋಟೆ ತಾಲೂಕಿನ ಹುನಗುಂದ-ಸುರಪುರ-ರಾಜ್ಯ ಹೆದ್ದಾರಿ 60 ಕಿ.ಮೀ. 70.23 ರಿಂದ 73.20ರವರೆಗೆ ಅಭಿವೃದ್ಧಿಪಡಿಸುವ 495.00 ಲಕ್ಷ ರೂ. ರಸ್ತೆ ಕಾಮಗಾರಿಗೆ ಹಾಗೂ 4 ಕೋಟಿ ರೂ. ವೆಚ್ಚದಲ್ಲಿಯ ಭಂಟನೂರ ಗ್ರಾಮದಲ್ಲಿ ನಡೆದ ಗೊಟಗುಣಕಿ-μàರಾಪುರ ವ್ಹಾಯಾ ಭಂಟನೂರ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ದೇವರಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 120 ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಾದ ನೀರು, ರಸ್ತೆ, ವಿದ್ಯುತ್‌, ಹಾಗೂ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಲು ಸಾಕಷ್ಟು ಅನುದಾನವನ್ನು ತಂದು ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ದನಾಗಿದ್ದೇನೆ. ವಿಜಯಪುರ ಮುಖ್ಯ ಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.

ಇನ್ನೂ ಉಪ ಕಾಲುವೆ ಹಾಗೂ ಹೊಲಗಾಲುವೆಗಳ ನಿರ್ಮಾಣಕ್ಕೆ ಸರ್ಕಾರದಿಂದ 524 ಕೋಟಿ ರೂ. ಮಂಜೂರಾತಿ ಸಿಕ್ಕಿದೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ ಅದರಂತೆ ಬೂದಿಹಾಳ-ಫೀರಾಪುರ ಏತ ನೀರಾವರಿಗೆ ಸಂಬಂದಿಸಿ ಹೊಲಗಾಲುವೆ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಕೊಡಗಾನೂರ ಗ್ರಾಮಕ್ಕೆ ಆಗಮಿಸಿದಾಗ ನೀಡಿದ ಭರವಸೆಯಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಅದರಂತೆ 152 ಕೋಟಿ ರೂ. ಮಂಜುರಾತಿಯನ್ನು ಅ ವೇಶನದೊಳಗೆ ನೀಡುವದಾಗಿ ತಿಳಿಸಿದ್ದಾರೆ, ಗ್ರಾಮೀಣ ರಸ್ತೆ ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದ್ದು ತಾಳಿಕೋಟೆಯಿಂದ ಕೊಡಗಾನೂರ-ಫೀರಾಪುರ, ತಾಳಿಕೋಟೆ-ಗಡಿಸೋಮನಾಳ-ಗೊಟಗ ‌ುಣಕಿ ವ್ಹಾಯಾ ಫೀರಾಪುರ ಕ್ರಾಸ್‌ವರೆಗೆ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು ಕೆಲವು ಕಾಮಗಾರಿಗಳು ಟೆಂಡರ್‌ ಹಂತದಲ್ಲಿವೆ.

Advertisement

ಇನ್ನೂ ಕೆಲವು ಕಾಮಗಾರಿಗಳ ಟೆಂಡರ್‌ ಮುಗಿದಿದ್ದು ಶೀಘ್ರದಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗುವದು. ತಾಳಿಕೋಟೆಯಿಂದ ಬಿಳೇಭಾವಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ನಿರ್ಮಾಣದ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು 15 ದಿನಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಿದ್ದೇನೆಂದ ಅವರು,. ಮತಕ್ಷೇತ್ರದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಎಲ್ಲ ಗ್ರಾಮಗಳಿಗೆ ಜಲ ಜೀವನ್‌ ಮಶೀನ ಅಡಿಯಲ್ಲಿ ಪ್ರತಿ ಮನೆಗಳಿಗೆ ನಳ ಸಂಪರ್ಕ ಕಾರ್ಯ ನಡೆಯುತ್ತಿದೆ ಅವುಗಳು ಮುಕ್ತಾಯಗೊಂಡರೆ ಕುಡಿಯುವ ನೀರಿನ ತಾಪತ್ರೆಯ ಸಂಪೂರ್ಣ ದೂರಾಗಲಿದೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ (ಅಸ್ಕಿ), ಸಂಗನಗೌಡ ಹೆಗರಡ್ಡಿ, ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಶೇಖರಗೌಡ ತಂಗಡಗಿ, ಬಸನಗೌಡ ಪಾಟೀಲ (ಲಕ್ಕುಂಡಿ), ಮುತ್ತು ದೇಸಾಯಿ ಶಂಕರಗೌಡ ದೇಸಾಯಿ, ಸೋಮನಗೌಡ ಹಾದಿಮನಿ, ಸಿದ್ದು ಬುಳ್ಳಾ, ಜಿಪಂ ಮಾಜಿ ಸದಸ್ಯ ಸಾಹೇಬಣ್ಣ ಆಲ್ಯಾಳ, ಪ್ರಶಾಂತ ಹಾವರಗಿ, ಪ್ರಧಾನ ಕಾರ್ಯದರ್ಶಿ ಬೀಮನಗೌಡ ಲಚ್ಯಾಣ, ಗುರುಗೌಡ ಗುರಡ್ಡಿ, ನಿಂಗನಗೌಡ ಕೊಡಗಾನೂರ, ಮುತ್ತುಗೌಡ ಮಾಳಿ, ಗುತ್ತಿಗೆದಾರ ರಮೇಶ ಕವಲಗಿ, ಮಾಜಿ ಟಿ.ಪಿ ಬಸನಗೌಡ ಪೀರಾಪೂರ, ಬಿ.ಎಂ. ಪಾಟೀಲ (ತಮದಡ್ಡಿ), ಕಿರಿಯ ಅಭಿಯಂತರ ಡಿ.ಬಿ. ಕಲಬುರ್ಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next