Advertisement

ವಿನಾಕಾರಣ ವರದಕ್ಷಿಣೆ ಕಿರುಕುಳ ದೂರಿನಿಂದ ಕಾನೂನಿನ ದುರ್ಬಳಕೆ

11:23 PM Apr 11, 2022 | Team Udayavani |

ಬೆಂಗಳೂರು: ಪತ್ನಿಯೊಂದಿಗಿನ ಕೌಟುಂಬಿಕ ಕಲಹ ಪ್ರಕರಣದಲ್ಲಿ ಪತಿಯ ಕುಟುಂಬದ ಸದಸ್ಯರನ್ನು ವಿನಾಕಾರಣ ಎಳೆದು ತರುವುದು ಕಾನೂನಿನ ದುರ್ಬಳಕೆ ಆಗುತ್ತದೆ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್‌, ಪತಿ ಜತೆಗಿನ ಕೌಟುಂಬಿಕ ಕಲಹದಲ್ಲಿ ತೊಡಗಿದ್ದ ಪತ್ನಿ, ವಿನಾಕಾರಣ ಪತಿಯ ತಂದೆ, ತಾಯಿ ಹಾಗೂ ನಾದಿನಿಯರ ವಿರುದ್ಧ ಹೂಡಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ರದ್ದುಪಡಿಸಿದೆ.

Advertisement

ತಮ್ಮ ವಿರುದ್ಧ ಸೊಸೆ ದಾಖಲಿಸಿರುವ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಮೂಲತಃ ಆಂಧ್ರಪ್ರದೇಶ ನಿವಾಸಿಗಳಾದ ಚಂದ್ರಶೇಖರ್‌ ಗೌಡ ಮತ್ತು ವರಲಕ್ಷ್ಮೀ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next