Advertisement

ಪೊಲೀಸರಿಗೆ ಅತ್ಯುನ್ನತ ತರಬೇತಿಗೆ ಯತ್ನ

01:55 AM Feb 06, 2019 | |

ಧಾರವಾಡ: ದೇಶ-ವಿದೇಶಗಳಲ್ಲಿ ಪೊಲೀಸರಿಗೆ ನೀಡುವ ತರಬೇತಿಯನ್ನು ನಮ್ಮ ಪೊಲೀಸರಿಗೂ ನೀಡುವ ಮೂಲಕ ತರಬೇತಿ ಪಥ ಬದಲಾಯಿಸಲಾಗುತ್ತಿದ್ದು, ಇದಕ್ಕಾಗಿ ಹಿರಿಯ ಅಧಿಕಾರಿಗಳ ನೇತೃತ್ವದ ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದರು.

Advertisement

ಸಿವಿಲ್‌ ಪೊಲೀಸ್‌ ಕಾನ್ಸ್‌ಟೇಬಲ್‌ಗ‌ಳ ನಿರ್ಗಮನ ಪಥ ಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೇರೆ ಇಲಾಖೆಗಳ ಸಿಬ್ಬಂದಿಗೆ ದೊರಕುವ ವೇತನ-ಸೌಲಭ್ಯಗಳು ಪೊಲೀಸರಿಗಿಲ್ಲ. ಈ ಹಿನ್ನೆಲೆಯಲ್ಲಿ ಔರಾದಕರ ಸಮಿತಿಯ ಶಿಫಾರಸುಗಳನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡುವ ಮೂಲಕ ಪೊಲೀಸರಿಗೆ ಸಮಾನ ವೇತನ-ಸೌಲಭ್ಯ ನೀಡಲು ಬದ್ಧವಾಗಿದೆ. ಈ ಕುರಿತು ಮುಖ್ಯಮಂತ್ರಿಗಳೂ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಪಿಎಸ್‌ಐ ನೇಮಕಕ್ಕೆ ತೀರ್ಮಾನ: ಸಾಮಾನ್ಯವಾಗಿ ಪೊಲೀಸ್‌ ಠಾಣೆಗಳಲ್ಲಿ ಒಬ್ಬರೇ ಪಿಎಸ್‌ಐ ಎಲ್ಲವನ್ನೂ ನೋಡಿಕೊಳ್ಳುವ ಕಾರಣದಿಂದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೆಲಸ ಹಂಚಿಕೆ ಮಾಡುವ ಮೂಲಕ ಪೊಲೀಸ್‌ ಠಾಣೆಗಳನ್ನು ಸಾರ್ವಜನಿಕ ಸ್ನೇಹಿಯನ್ನಾಗಿ ಮಾಡಲಾಗುವುದು. ಇದರೊಂದಿಗೆ ದೂರು ಸ್ವೀಕರಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ತೀರ್ಮಾನಿಸಲಾಗಿದೆ. ಪ್ರತಿ ಪೊಲೀಸ್‌ ಠಾಣೆಯಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡಲು ಹಾಗೂ ಅಪರಾಧ ಪ್ರಕರಣಗಳ ತನಿಖೆಗೆಂದು ತಲಾ ಒಂದೊ ಂದು ಪಿಎಸ್‌ಐ ನೇಮಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದರು.

ಪ್ರಶಸ್ತಿ ಪ್ರದಾನ: ಇಲ್ಲಿಯ ಕಲಘಟಗಿ ರಸ್ತೆಯಲ್ಲಿನ ಪೊಲೀಸ್‌ ತರಬೇತಿ ಶಾಲೆಯಲ್ಲಿ ಮಂಗಳವಾರ ನಡೆದ 4ನೇ ತಂಡದ ಸಿವಿಲ್‌ ಪೊಲೀಸ್‌ ಕಾನ್ಸ್‌ ಟೇಬಲ್‌ಗ‌ಳ ನಿರ್ಗಮನ ಪಥ ಸಂಚಲನದ ವೇಳೆ ಅತ್ಯುತ್ತಮ ಸಾಧನೆ ತೋರಿದವರಿಗೆ ಪ್ರಶಸ್ತಿ ನೀಡಿ ಗೌರವಿಸ ಲಾಯಿತು. ಕಾರವಾರ ಜಿಲ್ಲೆಯ ನಾರಾಯಣ ಎ.ಎಸ್‌.ಅವರಿಗೆ ಒಳಾಂಗಣ ವಿಭಾಗದಲ್ಲಿ ಪ್ರಥಮ, ಮೈಸೂರಿನ ನಾಗನಾಯಕ್‌ ಸಿ ಅವರಿಗೆ ದ್ವಿತೀಯ, ಹು-ಧಾ ಜ್ಞಾನೇಶ್ವರ ಹಿರೇಮಠಗೆ ತೃತೀಯ ಸ್ಥಾನ ನೀಡಲಾಯಿತು. ಹೊರಾಂಗಣ ವಿಭಾಗದಲ್ಲಿ ಚಿತ್ರದುರ್ಗದ ಅಶೋಕ ಎ,ಹು-ಧಾ ಮಹೇಶ ಹೆಸರೂರ, ಕಾರವಾರದ ನಾರಾಯಣ ಎ.ಎಸ್‌. ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರು. ಪೈರಿಂಗ್‌ ವಿಭಾಗದಲ್ಲಿ ಮಂಗಳೂರಿನ ರವಿಕುಮಾರ, ಕಾರವಾರದ ಕರಿಯಣ್ಣ, ಬೆಳಗಾವಿಯ ವಿಠuಲ ಮೊದಲ ಮೂರು ಪ್ರಶಸ್ತಿ ಪಡೆದರು. ಹಾಗೆಯೇ ಕಾರವಾರದ ನಾರಾಯಣ ಎಂ.ಎಸ್‌.ಅವರಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಲಿಂಗಾಯತ ಧರ್ಮ ನನ್ನ ಅಸ್ಮಿತೆ

Advertisement

ಧಾರವಾಡ: ಲಿಂಗಾಯತ ಧರ್ಮ ನನ್ನ ಅಸ್ಮಿತೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು. ಮಂಗಳವಾರ ಅವರು ಮುರುಘಾಮಠಕ್ಕೆ ಭೇಟಿ ನೀಡಿದರು. ಅವರನ್ನು ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸತ್ಕರಿಸಿದರು. ಈ ವೇಳೆ ಜತೆಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅವರೊಂದಿಗೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಕುರಿತಂತೆ ಕೆಲ ಹೊತ್ತು ಸಚಿವರು ಚರ್ಚಿಸಿದರು. ಇದಾದ ಬಳಿಕ ಶ್ರೀಮಠದಲ್ಲೇ ಮಧ್ಯಾಹ್ನ ಭೋಜನ ಸವಿದರು. ಈ ವೇಳೆ ಮಾತನಾಡಿದ ಸಚಿವರು, ಲಿಂಗಾಯತ ಧರ್ಮದ ವಿಚಾರ, ಹೋರಾಟ ಜೀವಂತವಾಗಿದೆ. ಈ ಹೋರಾಟ ಈಗ ಕಾನೂನಾತ್ಮಕವಾಗಿ ಮುಂದುವರಿಯುತ್ತದೆ.  ಾಜ್ಯದ ಗೃಹ ಸಚಿವನಾಗಿ ನಾನು ಈ ಹೋರಾಟದಲ್ಲಿ ಭಾಗಿಯಾಗಲ್ಲ. ಆದರೆ ಲಿಂಗಾಯತ ಧರ್ಮ ನನ್ನ ಅಸ್ಮಿತೆ ಆಗಿದೆ ಎಂದರು.

ಶೀಘ್ರವೇ ಕಂಪ್ಲಿ ಶಾಸಕ ಗಣೇಶ ಬಂಧನ

ಹುಬ್ಬಳ್ಳಿ: ಶಾಸಕರಾದ ಗಣೇಶ ಹಾಗೂ ಆನಂದ್‌ ಸಿಂಗ್‌ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಗಣೇಶ ಬಂಧನಕ್ಕೆ ವ್ಯಾಪಕ ಪ್ರಯತ್ನ ನಡೆಸಲಾಗುತ್ತಿದೆ. ಶೀಘ್ರವೇ ಅವರನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಗಣೇಶ ಅವರು ಆನಂದ ಸಿಂಗ್‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅವರ ಮೇಲೆ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಮೊಬೈಲ್‌ ಸ್ವಿಚ್ ಆಫ್‌ ಮಾಡಿಕೊಂಡು ಅಜ್ಞಾತ ಸ್ಥಳದಲ್ಲಿದ್ದಾರೆ. ಅವರ ಬಂಧನಕ್ಕೆ ಪೊಲೀಸ್‌ ಹಾಗೂ ಗೃಹ ಇಲಾಖೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕಾನೂನಿಗಿಂತ ದೊಡ್ಡವರ್ಯಾರು ಇಲ್ಲ. ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದರು. ಬಿಜೆಪಿಗೆ ಹೋಗಲ್ಲ: ಯಾವ ಶಾಸಕರೂ ರಾಜೀನಾಮೆ ಕೊಟ್ಟು ಬಿಜೆಪಿ ಸೇರಲ್ಲ. ರಮೇಶ ಜಾರಕಿಹೊಳಿ, ನಾಗೇಂದ್ರ, ಉಮೇಶ ಜಾಧವ ಸೇರಿ ಎಲ್ಲರೂ ನಮ್ಮ ಜತೆ ಇದ್ದಾರೆ. ಬಿಜೆಪಿಯವರು ಅಧಿಕಾರ ಪಡೆಯುತ್ತೇವೆಂದು ಹಗಲು ಕನಸು ಕಾಣುತ್ತಿದ್ದಾರೆ. ಅದ್ಯಾವುದೂ ಈಡೇರಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next