Advertisement

ಹೈಕೋರ್ಟ್‌ ಮೆಟ್ಟಿಲೇರಿದ ಕುದುರೆ ಮಾಲೀಕರು

11:23 AM Nov 18, 2017 | Team Udayavani |

ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್‌ನ ಪರವಾನಗಿ ನವೀಕರಣ ಮಾಡಲು ರಾಜ್ಯಸರ್ಕಾರ ಹಾಗೂ ಸಕ್ಷಮ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ 10 ಮಂದಿ ಕುದುರೆ ಮಾಲೀಕರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. 

Advertisement

ಈ ಕುರಿತು ಟರ್ಫ್ ಕ್ಲಬ್‌ ಸದಸ್ಯರಾದ ಎಚ್‌.ಎಸ್‌ ಚಂದ್ರೇಗೌಡ ಸೇರಿದಂತೆ 10 ಮಂದಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್‌ ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಟರ್ಫ್ ಕ್ಲಬ್‌ ಆಡಳಿತ ಮಂಡಳಿಗೆ ನೋಟಿಸ್‌ ಜಾರಿಗೊಳಿಸಿದೆ.

ರಾಜ್ಯಸರ್ಕಾರ ಕಳೆದ ಆಗಸ್ಟ್‌ 31ರಿಂದ ಕ್ಲಬ್‌ನ ಪರವಾನಿಗೆ ನವೀಕರಣಗೊಳಿಸದೆ ವಿಳಂಬ ಮಾಡುತ್ತಿದೆ. ಇದರಿಂದ ರೇಸ್‌ ನಡೆಯದೆ ಕುದುರೆ ಮಾಲೀಕರಿಗೆ ತೊಂದರೆಯಾಗುತ್ತಿದೆ. ರೇಸ್‌ ಕುದುರೆಗಳ ನಿರ್ವಹಣೆ ಕೂಡ ಕಷ್ಟವಾಗುತ್ತಿದೆ. ಜೊತೆಗೆ ಕ್ಲಬ್‌ ಹಾಗೂ ರಾಜ್ಯಸರ್ಕಾರಕ್ಕೂ ಕೋಟ್ಯಾಂತರ  ರೂ. ನಷ್ಟವುಂಟಾಗುತ್ತಿದೆ. ಹೀಗಾಗಿ ಕೂಡಲೇ ಕ್ಲಬ್‌ನ ಪರವಾನಗಿ ನವೀಕರಣ ಮಾಡಿಕೊಡಲು ರಾಜ್ಯಸರ್ಕಾರಕ್ಕೆ ಆದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next