Advertisement

ದಾಖಲಾತಿ ಒದಗಿಸಲು ಅಧೀನ ನ್ಯಾಯಾಲಯಕ್ಕೆಹೈಕೋರ್ಟ್‌ ನಿರ್ದೇಶನ

11:21 AM Sep 06, 2018 | Team Udayavani |

ಬೆಂಗಳೂರು: ಆರ್‌ಟಿಐ ಕಾರ್ಯಕರ್ತ ವಾಸುದೇವ ಅಡಿಗ ಕೊಲೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಒದಗಿಸುವಂತೆ ಅಧೀನ ನ್ಯಾಯಾಲಯಕ್ಕೆ ಹೈಕೋರ್ಟ್‌ ಬುಧವಾರ ನಿರ್ದೇಶನ ನೀಡಿದೆ. ಕೊಲೆ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಮೃತ ವಾಸುದೇವ ಅಡಿಗ ತಾಯಿ ಶೃಂಗೇಶ್ವರಿ ಅಡಿಗ ಹಾಗೂ ಪ್ರಕರಣದ ಪ್ರಾಸಿಕ್ಯೂಷನ್‌ ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆ ಅಂಗೀಕರಿಸಿದ ನ್ಯಾ. ರವಿಮಳಿಮಠ ಹಾಗೂ ನ್ಯಾ. ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ವಿಭಾಗೀಯ ಪೀಠ, ಪ್ರಕರಣದ ವಿಚಾಣೆಯ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಅಧೀನ ನ್ಯಾಯಾಲಯಕ್ಕೆ ಆದೇಶಿಸಿ ವಿಚಾರಣೆ ಮುಂದೂಡಿತು.

Advertisement

ಐದು ವರ್ಷಗಳ ಹಿಂದೆ ಆರ್‌ಟಿಐ ಕಾರ್ಯಕರ್ತ ವಾಸುದೇವ ಅಡಿಗ ಅವರ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ರಮೇಶ್‌ ಬಾಯರಿ, ಸುಬ್ರಹ್ಮಣ್ಯ ಉಡುಪ, ಉಮೇಶ್‌, ಸಿ. ನವೀನ್‌, ಕೆ.ಎಸ್‌. ರಾಘವೇಂದ್ರ, ಡಿ. ಮೋಹನ್‌ ಕುಮಾರ್‌, ಟಿ.ಸಿ. ರವಿಚಂದ್ರ ಹಾಗೂ ಎಸ್‌.ಕೆ. ವಿಜಯ ಸಾರಥಿ ಅವರನ್ನು ಖುಲಾಸೆಗೊಳಿಸಿ 2017ರ ಮೇ 11ರಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವಾಸುದೇವ ಅಡಿಗ ತಾಯಿ ಮತ್ತು ಪ್ರಾಸಿಕ್ಯೂಷನ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ವಾಸುದೇವ ಅಡಿಗ ಕೊಲೆಯಾಗುವ ಮುನ್ನ ಆರೋಪಿಗಳ ಜತೆ ಇರುವುದನ್ನು ಕೊನೆಯ ಬಾರಿ ನೋಡಿರುವ ಸಾಕ್ಷಿಗಳಿವೆ. ಕೊಲೆಯಾದ ವ್ಯಕ್ತಿಗೆ ಆರೋಪಿಗಳೇ ಕರೆ ಮಾಡಿ ಕರೆಸಿಕೊಂಡಿರುವುದು ಮೊಬೈಲ್‌ ಕರೆಗಳ ವರದಿಯಲ್ಲಿ ಸಾಬೀತಾಗಿದೆ.

ಆರೋಪಿಗಳೆಲ್ಲರೂ ಸಂಚು ರೂಪಿಸಿ ಕೊಲೆ ಮಾಡಿರುವುದಕ್ಕೆ ಸಾಕ್ಷಾಧಾರಗಳು ಲಭ್ಯವಿದ್ದರೂ, ಅಧೀನ ನ್ಯಾಯಾಲಯ ಅದ್ಯಾವುದನ್ನೂ ಪರಿಗಣಿಸಿಲ್ಲ ಎಂದು ಮೇಲ್ಮನವಿಯಲ್ಲಿ ದೂರಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next