Advertisement

Hi Nanna: ಭಾವನಾತ್ಮಕ ಕಥಾಹಂದರದ ಚಿತ್ರ ಹಾಯ್‌ ನಾನ್ನ

12:33 PM Jan 15, 2024 | Team Udayavani |

ಸೌಂದರ್ಯ,ಹಣ, ಅಂತಸ್ತು ಕಾಲ ಕಳೆದೆಂತೆ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತವೆ. ಇಂದು ಒಬ್ಬರ ಬಳಿಯಿದ್ದ ಹಣ ನಾಳೆ ಇನ್ನೊಬ್ಬರ ಬಳಿ ಹೊಗುತ್ತದೆ. ಇದರಿಂದಾಗಿ ಅವರ ಸಾಮಾಜಿಕ ಅಂತಸ್ತು ಸಹ ಹೆಚ್ಚಾಗುತ್ತದೆ, ಅದೇ ರೀತಿ ವಯಸ್ಸು ಕಳೆದಂತೆ ದೇಹದ ಸೌಂದರ್ಯ ಕಡಿಮೆಯಾಗುತ್ತಾ ಸಾಗುತ್ತದೆ, ಅದರೆ ಇಬ್ಬರ ನಡುವಿನ ಪ್ರೀತಿಗೆ ಎಷ್ಟೇ ವಯಸ್ಸಾದರು, ಎಷ್ಟೇ ಕಷ್ಟಗಳು ಬಂದರೂ ಪ್ರೀತಿಯಿಂದ ಕೂಡಿರುವ ಕುಟುಂಬವನ್ನು ಬೇರೆ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ತೆಲುಗಿನ ಚಿತ್ರ ಹಾಯ್‌ ನಾನ್ನ ಸಮಾಜಕ್ಕೆ ನೀಡುತ್ತದೆ.

Advertisement

ಹಾಯ್‌ ನಾನ್ನ ಚಿತ್ರ ಗಂಡ- ಹೆಂಡತಿ,  ಮಗಳು, ಅತ್ತೆ -ಮಾವ, ಸ್ನೇಹಿತರೆಂಬ ಸಂಬಂಧಗಳ ಮಹತ್ವವನ್ನು ಪ್ರೇಕ್ಷಕರಿಗೆ ತಿಳಿಯಪಡಿಸುತ್ತದೆ.ತೆಲುಗಿನ ನಟ ನಾನಿ ಅವರು ತಂದೆಯ ಪಾತ್ರದಲ್ಲಿ , ಗಂಡನ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆ.

ನಾನಿಯ ಅಭಿನಯದಲ್ಲಿ ಪ್ರಬುದ್ಧತೆಯನ್ನು ಕಾಣಬಹುದಾಗಿದೆ, ಚಿತ್ರ ಯಶಸ್ವಿಯಾಗುವುದಕ್ಕೆ ಬೇಕಾದ ಎಲ್ಲ ಅಂಶಗಳು ಚಿತ್ರದಲ್ಲಿದ್ದು, ನಾನಿ ಮತ್ತು ಮಗಳ ಪಾತ್ರದಲ್ಲಿ ನಟಿಸಿರುವ ಕಿಯಾರ ಕನ್ನಾ ಪ್ರೇಕ್ಷಕರರನ್ನು ಭಾವನಾತ್ಮಕವಾಗಿ ಸೆಳೆಯುವ ನೆಲೆಯಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆ.

ಚಿತ್ರದ ನಾಯಕಿ ಸೀತಾರಾಮನ್‌ ಖಾತ್ಯಿಯ ಮೃಣಾಲ್‌ ಟಾಕೂರ್‌  ತಮ್ಮ ಗ್ಲಾಮರಸ್‌ ಸೌಂದರ್ಯದ  ಜತೆಗೆ  ನಟನೆಯಲ್ಲು ಸಹ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮೃಣಾಲ್‌ ಟಾಕೂರ್‌ ನಗು ಅವರ ಪ್ಲಸ್‌ ಪಾಯಿಂಟ್‌ ಅಗಿದ್ದು , ದುಃಖ ಸನ್ನಿವೇಶದಲ್ಲಿ  ಅವರ ಚೆಲುವು ಇಮ್ಮಡಿಯಾಗಿತ್ತದೆ.

ಕೌಟುಂಬಿಕ ಪಾತ್ರಗಳಿಗೆ ಮೃನಾಲ್‌ ಟಾಕೂರ್‌ ಹೇಳಿ ಮಾಡಿಸಿದ ನಟಿಯಾಗಿದ್ದು, ಸೀರೆಯಲ್ಲೂ ಮತ್ತು ಮಾಡರ್ನ್ ಧಿರಿಸಿನಲ್ಲೂ ಸಹ ತಮ್ಮ ಸೌಂದರ್ಯವನ್ನು ಚೆಲ್ಲುತ್ತಾರೆ.ಹಿರಿಯ ಕಲಾವಿದರಾದ ಮಲಯಾಳಂ ಕಲಾವಿದ ಜಯರಾಂರ ಅಭಿನಯ ಸಹ ಜನರ ಮೆಚ್ಚುಗೆ ಪಡೆಯುವಲ್ಲಿ ಯಾವುದೇ ಸಂಶಯವಿಲ್ಲ.

Advertisement

ಹಾಯ್‌ ನಾನ್ನ ಚಿತ್ರದ ಸಂಗೀತ ಇಂಪಾಗಿದ್ದು, ಹೊಸತನದಿಂದ ಕೂಡಿದೆ, ಸಂಗೀತ ನಿರ್ದೇಶಕ ಖುಷಿ ಚಿತ್ರದ ಹೇಮೆಶ್‌  ಸಂಗೀತ ಚಿತ್ರದ ಯಶಸ್ಸಿಗೆ ಮತ್ತೂಂದು ಪ್ರಮುಖ ಅಂಶವೆಂದರೆ ತಪ್ಪಾ³ಗಲಾರದು. ಪ್ರೀತಿಸಿ ಮದುವೆಯಾದ ಜೋಡಿ ಸಣ್ಣ ಮನಸ್ತಾಪದಿಂದ ದೂರಾಗಿ, ಅಪಘಾತದಲ್ಲಿ ನೆನಪು ಕಳೆದುಕೊಳ್ಳುವ ನಾಯಕಿ  ಮತ್ತೂಮ್ಮೆ ಎರಡನೆ ಬಾರಿ ನಾಯಕನ ಕತೆ ಕೇಳಿ, ಮುಗ್ಧ ಮಗುವಿನ ಪ್ರೀತಿಗಾಗಿ ತನ್ನ ಗಂಡನ್ನನೇ ಪ್ರೀತಿಸುವ ಕಥೆ ಹೊಸದಾಗಿದೆ.

ಹಾಯ್‌ ನಾನ್ನ ಚಿತ್ರ ಹೊಸತನದಿಂದ ಕೂಡಿದ್ದು, ಸದಭಿರುಚಿಯ ಪ್ರೇಕ್ಷಕರರಿಗೆ ಮನೋರಂಜನೆ ನೀಡುವುದು ಖಾತ್ರಿ. ಭಾವನೆಗಳಿಗೆ ಭಾಷೆಯ ಹಂಗು ಇರುವುದಿಲ್ಲ. ಕೌಟುಂಬಿಕ ಚಿತ್ರವಾದ ಹಾಯ್‌ ನಾನಿ ಗಂಡ -ಹೆಂಡತಿ-  ಮಗುವಿನ ನಡುವೆಯಿರುವ ಭಾವನೆಗಳ ಕುರಿತಾದ ಚಿತ್ರವಾಗಿದ್ದು, ಇದನ್ನು ನೋಡುವ ಮೂಲಕ ಸಮಾಜದಲ್ಲಿನ ವಿವಾಹ ವಿಚ್ಛೇದನ ಮನಸ್ಸು ಮಾಡುವ ಇತ್ತೀಚಿನ ಜನಾಂಗಕ್ಕೆ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಅನ್ಯೂನ್ಯವಾಗಿದ್ದರೆ ಎಲ್ಲವೂ ಸಾಧ್ಯವೆಂಬ ಒಂದೊಳ್ಳೆ ಸಾಮಾಜಿಕ ಸಂದೇಶ ನೀಡುವ ಸಿನೆಮಾ ಇದಾಗಿದೆ.

-ರಾಸುಮ ಭಟ್‌

ವಿ.ವಿ., ಚಿಕ್ಕಮಗಳೂರು

Advertisement

Udayavani is now on Telegram. Click here to join our channel and stay updated with the latest news.

Next