Advertisement

ಹೆಮ್ಮಾಡಿ: ಕಚ್ಚಿದ ಹಾವಿನೊಂದಿಗೇ ಆಸ್ಪತ್ರೆಗೆ

10:43 AM Sep 02, 2017 | Team Udayavani |

ಕುಂದಾಪುರ: ಇಲ್ಲಿಗೆ ಸಮೀಪದ ತಲ್ಲೂರಿನ ಕೋಟೆಬಾಗಿಲು ಪಾರ್ತಿ ಕಟ್ಟೆಯ ಬಳಿಯ ಮನೆ ಯಲ್ಲಿ ಬೃಹತ್‌ ಗಾತ್ರದ ಹಾವನ್ನು ಹಿಡಿಯಲೆತ್ನಿಸುತ್ತಿದ್ದ ಹೆಮ್ಮಾಡಿಯ ಆಟೋ ಚಾಲಕ ಜೋಸೆಫ್‌ ಲೂವಿಸ್‌ ಅವರ ಬಲಗೈಗೆ ಹಾವು ಕಡಿದಿದ್ದು ಅವರು ಆ ಹಾವಿನೊಂದಿಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಧಾವಿಸಿದ ಘಟನೆ ಶುಕ್ರವಾರ ಸಂಭವಿಸಿದೆ. 

Advertisement

ಶುಕ್ರವಾರ ಸಂಜೆ ಮನೆಯ ಹಿತ್ತಿಲಲ್ಲಿ  ಹಾವು ಕಾಣಿಸಿಕೊಂಡಾಗ  ಮನೆಯವರು ಹಾವು ಹಿಡಿಯುವ ಹೆಮ್ಮಾಡಿಯ ಜೋಸೆಫ್‌ ಲೂವಿಸ್‌ ಅವರನ್ನು ಸಂಪರ್ಕಿಸಿದ್ದು ತತ್‌ಕ್ಷಣ  ಪಾರ್ತಿಕಟ್ಟೆಗೆ ಬಂದ ಜೋಸೆಫ್‌ ಹಿತ್ತಿಲಿಲ್ಲ  ಪೊದೆಯೊಳಗೆ ಅವಿತಿದ್ದ  ಹಾವನ್ನು ಹಿಡಿಯಲೆತ್ನಿಸಿದಾಗ ಹಾವು ಬಲಗೈಗೆ  ಕಡಿದಿತ್ತು. ಒಂದು ಕ್ಷಣ ವಿಚಲಿತರಾದ ಜೋಸೆಫ್‌ ಮುಂಜಾಗ್ರತಾ ಕ್ರಮವಾಗಿ ಹಾವು ಕಡಿದಿರುವ ಭಾಗಕ್ಕೆ ಬಟ್ಟೆ ಕಟ್ಟಿಕೊಂಡು ಹಾವಿನೊಂದಿಗೆ ಆಸ್ಪತ್ರೆಗೆ ಧಾವಿಸಿದ್ದರು.

ಘಟನೆ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಕುಂದಾಪುರದ ಅರಣ್ಯಾ ಧಿಕಾರಿಗಳು ಆಗಮಿಸಿ ಹಾವನ್ನು ಪರಿಶೀಲಿಸಿದಾಗ ಹೆಬ್ಟಾವು ಎಂದು ತಿಳಿದು ಬಂದಿತ್ತು.  ಅನಂತರ  ಜೋಸೆಫ್‌ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಮ್ಮಾಡಿಗೆ ಹಿಂದಿರುಗಿದರು.

Advertisement

Udayavani is now on Telegram. Click here to join our channel and stay updated with the latest news.

Next