Advertisement

ಹೇಮಾವತಿ ಹೋರಾಟ : ತುಮಕೂರಿನಲ್ಲಿ ರೈತ ಆತ್ಮಹತ್ಯೆ 

03:47 PM Aug 31, 2017 | |

ತುಮಕೂರು : ಹೇಮಾವತಿ ನೀರಿಗಾಗಿ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು ಗುರುವಾರ ಗುಬ್ಬಿ ತಾಲೂಕಿನ ಸೋಮಲಾಪುರದಲ್ಲಿ ರೈತನೊಬ್ಬ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Advertisement

ಕಾಲುವೆಯ ತೂಬು ಮುಚ್ಚಲು ಪೊಲೀಸರು ಮುಂದಾದುದನ್ನು ಪ್ರತಿಭಟಿಸಿ ಚೆಲುವರಾಜು (35) ಎಂಬ ರೈತ ಕಾಲುವೆಗೆ ಹಾರಿದ್ದು  ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

ಕೊಚ್ಚಿಹೋಗಿರುವ ರೈತನ ಶವಕ್ಕಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಪೊಲೀಸರ ವಿರುದ್ಧ ರೈತರ ಆಕ್ರೋಶ ಇನ್ನಷ್ಟು ಹೆಚ್ಚಾಗಿದೆ. 

ಹೇಮಾವತಿ ನಾಲೆಗೆ ರೈತರು ನೀರೆತ್ತಲು ಅಕ್ರಮವಾಗಿ ಅಳವಡಿಸಿದ್ದ ಮೋಟಾರ್‌ ಪಂಪ್‌ ಗಳನ್ನು ತೆರವುಗೊಳಿಸಲಾಗಿದೆ. ಈ ಬಗ್ಗೆ ರೈತರು ಜಾನುವಾರುಗಳಿಗೆ ನೀರಿಲ್ಲದೆ ಪರದಾಡುತ್ತಿದ್ದು ತೀವ್ರ ಆಕ್ರೋಶ ಹೊರಹಾಕಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next