Advertisement

ಅಂತಾರಾಜ್ಯ ಪ್ರಯಾಣಕ್ಕೆ ಬಸ್‌ ಸಹಾಯವಾಣಿ

07:55 AM May 11, 2020 | Suhan S |

ಬೆಂಗಳೂರು: ಸೇವಾಸಿಂಧು ಇ-ಪಾಸ್‌ ಹೊಂದಿರುವವರಿಗೆ ಅಂತಾರಾಜ್ಯ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೆಎಸ್‌ ಆರ್‌ಟಿಸಿ ಸೋಮವಾರ ಮೇ 11ರಿಂದ ಸಹಾಯವಾಣಿ ಆರಂಭಿಸುತ್ತಿದೆ. ಲಾಕ್‌ಡೌನ್‌ ಹಿನ್ನೆಲೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ ತೆರಳಲು ಸೇವಾಸಿಂಧು ಇ-ಪಾಸ್‌ ಪಡೆದ ಪ್ರಯಾಣಿಕರ ಮಾಹಿತಿ ಪಡೆಯಲು ಹಾಗೂ ಪ್ರಯಾಣಿಕರಿಗೆ ಸೂಕ್ತ ಮಾಹಿತಿಯನ್ನು ಈ ಸಹಾಯವಾಣಿ ಮೂಲಕ ನೀಡಲಾಗುತ್ತದೆ.

Advertisement

ಮಾಹಿತಿ ಅಗತ್ಯವಿರುವ ಪ್ರಯಾಣಿಕರು ಸಹಾಯವಾಣಿಗೆ ಕರೆ ಮಾಡಬಹುದು. ಪ್ರಯಾಣಿಕರ ಮಾಹಿತಿ ಪಡೆದ ನಂತರ ಬಸ್‌ಗಳ ಕಾರ್ಯಾಚರಣೆ ದಿನಾಂಕ ತಿಳಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಸಹಾಯವಾಣಿ ಸಂಖ್ಯೆ:ತಮಿಳುನಾಡು – ಪಾಂಡಿಚೇರಿ: 7760990100, 7760990560, 7760990034, ಆಂಧ್ರಪ್ರದೇಶ -ತೆಲಂಗಾಣ ರಾಜ್ಯ: 7760990561, 7760990532, 7760990955, ಕೇರಳ 7760990287, 7760990988ಕ್ಕೆ ಸಂಪರ್ಕಿಸಿ.

Advertisement

Udayavani is now on Telegram. Click here to join our channel and stay updated with the latest news.

Next