Advertisement

ಸಮಾಜಕ್ಕೆ ನೀಡಿದ ಸಹಾಯ ಎಂದೂ ವ್ಯರ್ಥವಾಗದು: ಡಾ|ಆರ್‌. ಕೆ. ಶೆಟ್ಟಿ

01:30 PM Sep 29, 2021 | Team Udayavani |

ನವಿಮುಂಬಯಿ: ಸಂಘವು ನೀಡುತ್ತಿರುವ ಸೌಲಭ್ಯ ಪಡೆಯಲು ಸಂಘದ ಸದಸ್ಯರಾಗುವ ಅಗತ್ಯವಿದೆ. ನಮ್ಮ ಹಿರಿಯರು ಸಮಾಜ ಬಾಂಧವರಿಗೆ ಸಹಾಯ ಮಾಡುವ ಸದುದ್ದೇಶದಿಂದ ಬಂಟರ ಸಂಘವನ್ನು ಸ್ಥಾಪಿಸಿದರು. ಇಂದು ಬಂಟರ ಸಂಘವು ಹೆಚ್ಚಿನ ಎಲ್ಲ  ಕ್ಷೇತ್ರಗಳಲ್ಲೂ ಸಮಾಜ ಬಾಂಧವರಿಗೆ ಸಹಾಯವಾಗುವಂತಹ ಕೆಲಸ ಮಾಡುತ್ತಿದೆ ಎನ್ನಲು ಸಂತೋಷವಾಗುತ್ತಿದೆ. ಆದ್ದರಿಂದ ಸಂಘದ ಸದಸ್ಯತ್ವ ಪಡೆದು ಸಮಾಜ ಬಾಂಧವರು ಸಂಘವು ನೀಡುತ್ತಿರುವ ಸೌಲಭ್ಯಗಳ ಸದುಪಯೋಗ ಪಡೆದು ಕೊಳ್ಳಬೇಕು. ಈ ನಿಟ್ಟಿನಲ್ಲಿ  ನವಿಮುಂಬಯಿ ಪ್ರಾದೇಶಿಕ ಸಮಿತಿ ಆಯೋಜಿಸಿದ ಬಂಟರ ಸಂಘ ನಮ್ಮ ಮನೆಯಲ್ಲಿ-ನಮ್ಮ ಮನದಲ್ಲಿ  ಎಂಬ ಕಾರ್ಯಕ್ರಮ ಅಭಿನಂದನೀಯವಾಗಿದೆ ಎಂದು ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್‌. ಕೆ. ಶೆಟ್ಟಿ  ತಿಳಿಸಿದರು.

Advertisement

ಸೆ. 26ರಂದು ಐರೋಲಿಯ ಹೆಗ್ಗಡೆ ಭವನದಲ್ಲಿ  ಬಂಟರ ಸಂಘ ಮುಂಬಯಿ ಇದರ ನವಿಮುಂಬಯಿ ಪ್ರಾದೇಶಿಕ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ “ಬಂಟರ ಸಂಘ ನಮ್ಮ ಮನೆಯಲ್ಲಿ  ನಮ್ಮ ಮನದಲ್ಲಿ’ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಕ್ಕೆ ನಾವು ನೀಡಿದ ಸಹಾಯವು ಎಂದೂ ವ್ಯರ್ಥವಾಗುವುದಿಲ್ಲ. ಸಮಾಜದ ಋಣ ನಮ್ಮಲ್ಲಿ ಸದಾ ಇರುತ್ತದೆ. ಅದನ್ನು ತೀರಿಸಲು ಸಂಘ-ಸಂಸ್ಥೆಗಳು ಒಂದು ಉತ್ತಮ ಮಾರ್ಗವಾಗಿದೆ. ಸಂಘಗಳ ಮೂಲಕ ಸಮಾಜ-ಬಾಂಧವರು, ದಾನಿ ಗಳು ಮುಂದೆ ಬಂದು ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್‌ ಶೆಟ್ಟಿ  ಪಡುಬಿದ್ರಿ ಅತಿಥಿ-ಗಣ್ಯರನ್ನು ಪರಿಚಯಿಸಿ, ಸ್ವಾಗತಿಸಿ ಗೌರವಿಸಿದರು. ಈ ಸಂದರ್ಭ ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ ಅವರು ಬಂಟರ ಸಂಘದ ಸಂಬಂಧ ಹಾಗೂ ನಮ್ಮ ಸಾಮಾಜಿಕ ಜವಾಬ್ದಾರಿ ಬಗ್ಗೆ ಉಪನ್ಯಾಸ ನೀಡಿದರು.

ಇದೇ ಸಂದರ್ಭ ಪರಿಸರದ ದಾನಿಗಳಾದ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಉದ್ಯಮಿ ವಿಠ‍್ಠಲ್‌ ಶೆಟ್ಟಿ ಹೇರೂರು, ಜಯಪ್ರಕಾಶ್‌ ಶೆಟ್ಟಿ, ದಯಾನಂದ ಶೆಟ್ಟಿ, ಕರುಣಾಕರ್‌ ಶೆಟ್ಟಿ, ಸಿಎ ರವೀಂದ್ರ ಶೆಟ್ಟಿ, ಅಶೋಕ್‌ ಶೆಟ್ಟಿ, ರಾಜೀವ್‌ ಎಸ್‌. ಶೆಟ್ಟಿ, ಸತೀಶ್‌ ಶೆಟ್ಟಿ, ಪದ್ಮನಾಭ ಶೆಟ್ಟಿ  ಹಾಗೂ ವಿವಿಧ ಕ್ಷೇತ್ರಗಳಲ್ಲಿ  ಗಣನೀಯ ಸೇವೆಗೈದ ಸಾಧಕರಾದ ಧಾರ್ಮಿಕ ಕ್ಷೇತ್ರದಲ್ಲಿ ಪ್ರಕಾಶ ಆಳ್ವ, ಕಲಾಕ್ಷೇತ್ರದಲ್ಲಿ ಆನಂದ ಶೆಟ್ಟಿ ಇನ್ನಾ, ಸಮಾಜ ಸೇವೆಯಲ್ಲಿ ಗೀತಾ ಜಿ. ಶೆಟ್ಟಿ, ವೈದ್ಯಕೀಯ ಸೇವೆಯಲ್ಲಿ  ಡಾ| ಶಿಲ್ಪಾ ಕೆ. ಶೆಟ್ಟಿ, ಶೈಕ್ಷಣಿಕ ಸೇವೆಯಲ್ಲಿ  ರೂಪಾ ಸಂತೋಷ್‌ ಶೆಟ್ಟಿ ಮೊದಲಾದವರನ್ನು  ಅತಿಥಿಗಳು ಶಾಲು ಹೊದೆಸಿ, ಸ್ಮರಣಿಕೆಯನ್ನಿತ್ತು ಗೌರವಿಸಿದರು.

ಎಸ್‌ಎಸ್‌ಸಿ ಹಾಗೂ ಎಚ್‌ಎಸ್‌ಸಿ ಪರೀಕ್ಷೆಯಲ್ಲಿ  ಉತ್ತಮ ಅಂಕ ಗಳಿಸಿದ ದಿಘಾ, ಐರೋಲಿ, ಘನ್ಸೋಲಿ, ಪರಿಸರದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ವನ್ನಿತ್ತು ಗೌರವಿಸಲಾಯಿತು. ವೈದ್ಯಕೀಯ ಶಿಕ್ಷಣ ಪಡೆದು ಉತ್ತೀರ್ಣರಾದ ಡಾ| ರಿಯಾ ನಾಗೇಶ್‌ ಶೆಟ್ಟಿ  ಪರವಾಗಿ ಅವರ ತಂದೆ ನಾಗೇಶ್‌ ಶೆಟ್ಟಿ ಬೈಕಾಡಿ ಹೆದ್ದಾರಿ ಮನೆ ಅವರನ್ನು ಸಮ್ಮಾನಿಸಿ ಅಭಿನಂದಿಸಲಾಯಿತು.

Advertisement

ಬಂಟರ ಸಂಘ ಮುಂಬಯಿ ಇದರ ಸದಸ್ಯತ್ವ ಸಮಿತಿಯ ಕಾರ್ಯಾಧ್ಯಕ್ಷ ಎನ್‌. ಸಿ. ಶೆಟ್ಟಿ ಸಮಾಜ ಬಾಂಧವರಿಗೆ ಸದಸ್ಯತ್ವ ನೋಂದಣಿಯಿಂದ ಆಗುವ ಲಾಭದ ಬಗ್ಗೆ ಹಾಗೂ ಸ್ಥಳೀಯ ಸಮಿತಿಯಿಂದ ಸದಸ್ಯತ್ವ ಹೆಚ್ಚಿಸುವುದರ ಬಗ್ಗೆ ಮಾಹಿತಿ ನೀಡಿದರು. ಮಾತೃಭೂಮಿ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ಸಮಾಜ ಬಾಂಧವರಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಸೊಸೈಟಿಯ ವಿಶೇಷ ಅಧಿಕಾರಿ ಹರೀಶ್‌ ಶೆಟ್ಟಿ ಶಿಮುಂಜೆ ಮಾಹಿತಿ ನೀಡಿದರು.

ಬಂಟರ ಸಂಘದ ಜತೆ ಕಾರ್ಯದರ್ಶಿ ಇಂದ್ರಾಳಿ ದಿವಾಕರ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಎನ್‌. ಸಿ. ಶೆಟ್ಟಿ, ಸಂಚಾಲಕ ಜಗದೀಶ್‌ ಶೆಟ್ಟಿ  ನಂದಿಕೂರು, ಸ್ಥಳೀಯ ಸಮಿತಿಯ ಕೋಶಾಧಿಕಾರಿ ರವೀಶ್‌ ಜಿ. ಶೆಟ್ಟಿ, ಜತೆ ಕಾರ್ಯದರ್ಶಿ ನಾಗೇಶ್‌ ಶೆಟ್ಟಿ  ಬೈಕಾಡಿ, ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಧೀರಜ್‌ ವಿ. ಶೆಟ್ಟಿ, ಸತೀಶ್‌ ಶೆಟ್ಟಿ  ಮೂಡು ಕೊಟ್ರಪಾಡಿ, ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಸಂಜೀವ ಶೆಟ್ಟಿ, ಉದ್ಯಮಿ ತಾಳಿಪಾಡಿಗುತ್ತು ಭಾಸ್ಕರ್‌ ಶೆಟ್ಟಿ, ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಸಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ನಿಶ್ಮಿತಾ ಎಸ್‌. ಶೆಟ್ಟಿ. ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ಸಮಿತಿಯ ಎಲ್ಲ ಪದಾಧಿಕಾರಿಗಳು ಹಾಗೂ ಪರಿಸರದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಿದ್ದರು. ಸನ್ನಿಧಿ ಶೆಟ್ಟಿ  ಪ್ರಾರ್ಥನೆ ಹಾಡಿದರು. ಪ್ರಾದೇಶಿಕ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬಂಟರ ಸಂಘ ನೀಡುತ್ತಿರುವ ಸೌಲಭ್ಯಗಳು ಪ್ರತಿಯೋರ್ವ ಸಾಮಾನ್ಯ ಸಮಾಜ ಬಂಧುಗಳಿಗೂ ತಲುಪಬೇಕು. ಸಂಘವು ಮಾಡುತ್ತಿರುವ ಸಮಾಜಪರ ಕಾರ್ಯಗಳ ಅರಿವು ಎಲ್ಲರಿಗೂ ಇರಬೇಕು. ಇದರ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕು. ಇದಕ್ಕಾಗಿ ಪ್ರತಿ ಮನೆಯಿಂದಲೂ ಸದಸ್ಯತ್ವ ಅಭಿಯಾನ ಮಾಡಬೇಕು ಎಂಬ ಸದುದ್ದೇಶ ಇಟ್ಟುಕೊಂಡು ಬಂಟರ ಸಂಘ ನಮ್ಮ ಮನೆಯಲ್ಲಿ-ನಮ್ಮ ಮನದಲ್ಲಿ ಎಂಬ ವಿನೂತನವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಾತೃಭೂಮಿ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ಸಮಾಜ ಬಾಂಧವರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು.-ಹರೀಶ್‌ ಶೆಟ್ಟಿ ಪಡುಬಿದ್ರೆ, ಕಾರ್ಯಾಧ್ಯಕ್ಷರು, ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿ

ಸಂಘದ ಒಂಬತ್ತು ಪ್ರಾದೇಶಿಕ ಸಮಿತಿಗಳಲ್ಲಿ  ನವಿಮುಂಬಯಿ ಪ್ರಾದೇಶಿಕ ಸಮಿತಿಯು ಮೊದಲ ಸಮಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಂಟರ ಸಂಘದ ಪ್ರಾದೇಶಿಕ ಸಮಿತಿಗಳಲ್ಲಿ ಮೊಟ್ಟಮೊದಲು ಸ್ಥಳೀಯ ಸಮಿತಿಯನ್ನು ಸ್ಥಾಪಿಸಿದ್ದು ನವಿಮುಂಬಯಿಯಲ್ಲಿ ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಇಂದು ವಿನೂತನವಾದ ಬಂಟರ ಸಂಘ ನಮ್ಮ ಮನೆಯಲ್ಲಿ-ನಮ್ಮ ಮನದಲ್ಲಿ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಇತರ ಸಮಿತಿಗಳಿಗೆ ನವಿಮುಂಬಯಿ ಪ್ರಾದೇಶಿಕ ಸಮಿತಿ ಮಾದರಿಯಾಗಿದೆ. ಸಂಘದ ಸಮಾಜಪರ ಯೋಜನೆಗಳು ಸಮಾಜ ಬಾಂಧವರ ಮನೆ-ಮನಗಳಿಗೆ ತಲುಪುವಲ್ಲಿ ಪ್ರಾದೇಶಿಕ ಸಮಿತಿಗಳ ಕಾರ್ಯ ಅಭಿನಂದನೀಯ.-ಸುಬ್ಬಯ್ಯ ಶೆಟ್ಟಿ, ಸಮನ್ವಯಕರು, ಬಂಟರ ಸಂಘ ಪೂರ್ವ ವಲಯದ ಪ್ರಾದೇಶಿಕ ಸಮಿತಿಗಳು

-ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next