Advertisement

ನಾಲ್ಕೂರು: ಕನ್ನಡದಲ್ಲಿ ಫೇಲ್ ಆದೆ ಎಂದು ನೇಣಿಗೆ ಶರಣಾದ ವಿದ್ಯಾರ್ಥಿನಿ

09:42 AM Apr 17, 2019 | Team Udayavani |

ಉಡುಪಿ: ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಯಲ್ಲಿ ಅನುತ್ತೀರ್ಣ ಆದೆ ಎಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಕ್ಕರ್ಣೆ ಸಮೀಪದ ನಾಲ್ಕೂರಿನಲ್ಲಿ ಸೋಮವಾರ ನಡೆದಿದೆ.

Advertisement

ನಾಲ್ಕೂರು ಗ್ರಾಮದ ಮಾರಾಳಿ ನಡ್ಕೇರಿಯ ದಿ.ದಯಾನಂದ ಶೆಟ್ಟಿ ಅವರ ಪುತ್ರಿ ಪ್ರಜ್ಞಾ(18) ಎಂಬ ವಿದ್ಯಾರ್ಥಿನಿ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಹೊರತುಪಡಿಸಿ ಉಳಿದ ವಿಷಯಗಳಲ್ಲಿ ಉತ್ತಮ ಅಂಕ ಗಳಿಸಿದ್ದಳು.

ಆದರೆ ಈಕೆಗೆ ಕನ್ನಡದಲ್ಲಿ 4 ಅಂಕ ಸಿಕ್ಕಿದೆ ಎಂದು ವೆಬ್ ಸೈಟ್ ನಲ್ಲಿ ಪ್ರಕಟವಾಗಿತ್ತು. ಪೊಲಿಟಿಕಲ್ ಸೈನ್ಸ್ ನಲ್ಲಿ 91, ಸೋಶಿಯಾಲಜಿ 75 ಅಂಕ, ಅರ್ಥಶಾಸ್ತ್ರದಲ್ಲಿ 82, ಇತಿಹಾಸ 60 ಹಾಗೂ ಇಂಗ್ಲಿಷ್ ನಲ್ಲಿ 74 ಅಂಕ ಸಿಕ್ಕಿತ್ತು.

ಕನ್ನಡ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಕ್ಕೆ ಮನನೊಂದು ನೇಣಿಗೆ ಶರಣಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಘಟನೆ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next