Advertisement

ಹೆಬ್ರಿ: ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ

07:35 AM Jul 26, 2017 | Team Udayavani |

ಹೆಬ್ರಿ: ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಬೇಕು. ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿದ ಆಜ್ಞೆಯನ್ನು ಸರಕಾರ ಪಾಲನೆ ಮಾಡಬೇಕು. ಮದ್ಯಪಾನದಿಂದ ಬಡತನ, ಅನಾರೋಗ್ಯ, ಶೋಷಣೆ, ಅಪಘಾತ, ಅಪರಾಧ, ಕೌಟುಂಬಿಕ ಕಲಹ, ಸಮಾಜದಲ್ಲಿ ಅಶಾಂತಿ ತಲೆದೋರುತ್ತದೆ. ಸರಕಾರ ಮದ್ಯಪಾನ ನಿಷೇಧ ಮಾಡುವ ಬದಲು ದಿನದಿಂದ ದಿನಕ್ಕೆ ಮದ್ಯ ಮಾರಾಟ ಮಳಿಗೆಗಳಿಗೆ ಪರವಾನಿಗೆ ನೀಡುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯದ ಅಂಗಡಿಗಳನ್ನು  ನಿಷೇಧದ ಆದೇಶದಂತೆಯೇ ಹೆಬ್ರಿ-ಮುದ್ರಾಡಿ ಪರಿಸರದಲ್ಲಿ ಹೊಸ ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡಬಾರದು ಎಂದು ಜನಜಾಗೃತಿ ವೇದಿಕೆ ಹೆಬ್ರಿ ವಲಯದ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು.

Advertisement

ಅವರು ಜು. 25ರಂದು ಶ್ರೀ. ಕ್ಷೇ.ಧ.ಗ್ರಾ.ಯೋಜನೆ (ರಿ.) ಹಾಗೂ ಜನಜಾಗೃತಿ ವೇದಿಕೆ ಹೆಬ್ರಿ ವಲಯ ಇವರ ವತಿಯಿಂದ ನಡೆದ ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಬೇಕು ಹಾಗೂ ನೂತನ ಮದ್ಯದಂಗಡಿಗಳಿಗೆ ಪರವಾನಿಗೆ ನೀಡದಂತೆ ಹೆಬ್ರಿ ಅನಂತಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜನರಲ್ಲಿ ಜಾಗೃತಿ: ಈಗಾಗಲೇ ಧರ್ಮಸ್ಥಳ ಯೋಜನೆಯ ಮೂಲಕ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಜನಜಾಗೃತಿ ವೇದಿಕೆ ರಾಜ್ಯ ಮಟ್ಟದಲ್ಲಿ ಸಂಘಟಿತರಾಗಿದ್ದು ಮದ್ಯಪಾನ ನಿಷೇಧ ಕುರಿತು ನಿರಂತರ ಹೋರಾಟ ನಡೆಸಲಿದೆ ಎಂದು ಯೋಜನಾಧಿಕಾರಿ ಕೃಷ್ಣ ಟಿ. ಹೇಳಿದರು.

ರಾಜಕೀಯ ರಹಿತ ಹೋರಾಟ: ಮದ್ಯ ಪಾನ ಎಂಬುವುದು ಶಾಪ. ಅದನ್ನು ಹೋಗ ಲಾಡಿಸಲು ಪ್ರತಿಯೊಬ್ಬರು ಸಂಘಟಿತರಾಗಿ ರಾಜ ಕೀಯ ರಹಿತ  ಹೋರಾಡಬೇಕು ಎಂದು ಶಿವಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ್‌ ಶೆಟ್ಟಿ ಹೇಳಿದರು.

ಪ್ರತಿಭಟನ ಮೆರೆವಣಿಗೆ, ಮನವಿ:  ಹೆಬ್ರಿ ದೇವಸ್ಥಾನ ವಠಾರದಿಂದ ಬಸ್‌ ತಂಗುದಾಣ ತನಕ ಪ್ರತಿಭಟನ ಮೆರವಣಿಗೆ ಬಳಿಕ ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಸುಧಾಕರ ಹೆಗ್ಡೆ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

Advertisement

ಜನಜಾಗೃತಿ ವೇದಿಕೆಯ ತಾ| ಅಧ್ಯಕ್ಷ ಕಮಲಾಕ್ಷ ನಾಯಕ್‌, ಹೆಬ್ರಿ ಗ್ರಾ.ಪಂ. ಉಪಾಧ್ಯಕ್ಷೆ ವೀಣಾ ಪ್ರಭು, ತಾ.ಪಂ. ಸದಸ್ಯ ರಮೇಶ್‌ ಕುಮಾರ್‌, ನೇತ್ರಾವತಿ ಶೆಟ್ಟಿ , ಜಗನ್ನಾಥ ಕುಲಾಲ್‌, ಇಂದಿರಾ ನಾಯ್ಕ, ಕೃಷ್ಣ, ಸುಧಾಕರ ಶೆಟ್ಟಿ, ಭೋಜ ನಾಯ್ಕ ಮೊದಲಾದವರಿದ್ದರು.  

ಹರೀಶ್‌ ಆಚಾರ್ಯ ಸ್ವಾಗತಿಸಿ,   ಸಹದೇವ ಕಾರ್ಯಕ್ರಮ ನಿರೂಪಿಸಿ, ಗಿರೀಶ್‌ ವಂದಿಸಿದರು.

ಮೆಹೆಂದಿಗೆ ಸಾಲ 

ಮದುವೆ ಆನ್ನುವ ಪವಿತ್ರ ಕಾರ್ಯಕ್ರಮದ ಸಂಭ್ರಮ ಇಂದು ಮರೆಯಾಗಿದ್ದು ಮೆಹೆಂದಿ ಎನ್ನುವ ಅದ್ದೂರಿಯ ಸಂಭ್ರಮ ಎಲ್ಲರಲ್ಲಿ ಮನೆ ಮಾಡಿದೆ. ಇದಕ್ಕೆ ಕಾರಣ ಮದ್ಯಪಾನದಂತಹ ದುಶ್ಚಟಕ್ಕೆ ಯುವ ಜನತೆ ಬಲಿಯಾಗಿರುವುದು.

ಬಡತನವಿದ್ದರೂ ಇಂದು ಮೆಹೆಂದಿ ಕಾರ್ಯಕ್ರಮಕ್ಕೆ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಅದ್ದೂರಿ ಖರ್ಚು ಮಾಡುವ ಮೂಲಕ ಸಮಾಜದ ಶಾಂತಿ ನೆಮ್ಮದಿ ಕೆಡಿಸುವವರು ತುಂಬಿದ್ದಾರೆ. ನಾವು ಬದಲಾದಾಗ ಮಾತ್ರ ನಮ್ಮ ಸಮಾಜವನ್ನು ಬದಲಿಸಬಹುದು. ಪ್ರತಿಯೊಬ್ಬರೂ ಕೂಡ ಮದ್ಯಪಾನ ನಿಷೇಧಿಸುವಲ್ಲಿ ಸಂಘಟಿತರಾಗಬೇಕು.
– ನೀರೆ ಕೃಷ್ಣ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next