Advertisement

ಹೆಬ್ರಿಯ ವಾಹನ ಮಾಲಕ ಜೈಪುರದಲ್ಲಿ ನಾಪತ್ತೆ

08:42 AM May 13, 2020 | mahesh |

ಹೆಬ್ರಿ: ಮಣಿಪಾಲದಿಂದ ಶಿಕ್ಷಕರನ್ನು ಅವರ ಊರಾದ ಜೈಪುರಕ್ಕೆ ಬಿಡಲು ಹೋಗಿರುವ ಟಿ.ಟಿ. ವಾಹನದ ಮಾಲಕ ಪ್ರಕಾಶ ಅವರು ಮೇ 11ರಂದು ರಾತ್ರಿಯಿಂದ ಜೈಪುರದಿಂದ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ಶಿಕ್ಷಕರನ್ನು ಅವರವರ ಊರಿಗೆ ಬಿಟ್ಟು ವಾಪಸಾಗುತ್ತಿದ್ದಾಗ ಪ್ರಕಾಶ್‌ ಜತೆಗಿದ್ದ ಹೆಬ್ರಿಯ ಇನ್ನೋರ್ವ ಚಾಲಕ ವಾಹನದಲ್ಲಿಯೇ ನಿದ್ದೆಗೆ ಜಾರಿದ್ದರು. ಪ್ರಕಾಶ ಅವರು ರಾತ್ರಿ 2 ಗಂಟೆ ಸುಮಾರಿಗೆ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ವಾಹನದ ಕೀಯೊಂದಿಗೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಜತೆಗಿದ್ದ ಜನಾರ್ದನ ಅವರು ಜೈಪುರ ಬಾಂಕ್ರೋಟಾ ಠಾಣೆಗೆ ದೂರು ನೀಡಿದ್ದು, ಶೋಧ ಮುಂದುವರಿದಿದೆ.

ಈ ನಡುವೆ ಪ್ರಕಾಶರ ಪತ್ನಿ ಪ್ರಿಯಾಂಕಾ ಅವರು ಪತಿ ನಾಪತ್ತೆಯಾಗಿರುವ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಗೆ ದೂರು ನೀಡಲು ಹೋದಾಗ ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕಾಶ ಅವರು ಮೇ 11ರ ರಾತ್ರಿ 2 ಗಂಟೆ ತನಕ ದೂರವಾಣಿ ಸಂಪರ್ಕದಲ್ಲಿದ್ದರು. ಬಳಿಕ ಫೋನ್‌ ಮಾಡಿದಾಗ ಮೊಬೈಲನ್ನು ವಾಹನದಲ್ಲಿಯೇ ಬಿಟ್ಟು ಹೋಗಿರುವುದು ತಿಳಿದು ಬಂದಿದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next