Advertisement

ಭಾರೀ ಗಾಳಿ, ಮಳೆ: ನೆಲಕ್ಕುರುಳಿದ ಮೆಕ್ಕೆಜೋಳ

03:59 PM Sep 28, 2018 | |

ಕುರುಗೋಡು: ಸಮೀಪದ ಸಿದ್ದಮ್ಮನಹಳ್ಳಿ ಹಾಗೂ ಒರ್ವಾಯಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಗಾಳಿ, ಮಳೆಯಿಂದಾಗಿ ಮಕ್ಕೆಜೋಳ ನೆಲಕ್ಕೆ ಬಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜೀವನ ಜೀವನ ಅಸ್ತವ್ಯಸ್ತವಾಗಿದೆ.

Advertisement

ಭಾರೀ ಗಾಳಿ, ಮಳೆಯಿಂದಾಗಿ ಸಿದ್ದಮ್ಮನಹಳ್ಳಿ ಗ್ರಾಮದ ರೈತರಾದ ಹನುಮಂತರೆಡ್ಡಿ, ಉಮೇಶ, ಮಲ್ಲಯ್ಯ, ಬಸವರಾಜ, ಎಂ.ವೀರೇಶ, ಎಸ್‌. ಹನುಮಂತಪ್ಪ, ತಳವಾರ ಬಿಳಿ ಬಾಯಪ್ಪ, ಶಿವಪ್ಪ ಸೇರಿದಂತೆ ಇನ್ನಿತರ ರೈತರ ಸುಮಾರು 150 ಎಕರೆ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಮುಸುಕಿನಜೋಳ ನೆಲಕ್ಕೆ ಬಾಗಿ ಹಾನಿಯುಂಟಾಗಿದೆ. ಅಲ್ಲದೇ, ಒರ್ವಾಯಿ ಹಾಗೂ ಒರ್ವಾಯಿ ಗ್ರಾಪಂ ವ್ಯಾಪ್ತಿಯ ಗುತ್ತಿಗನೂರು ಗ್ರಾಮದ ತಗ್ಗು ಪ್ರದೇಶದ ಮನೆಗಳು, ಹೋಟೆಲ್‌ಗ‌ಳಿಗೆ ನೀರು ನುಗ್ಗಿ ನಿವಾಸಿಗಳು ರಾತ್ರಿಯೀಡಿ ಜಾಗರಣೆ ಮಾಡುವಂತಾಗಿತ್ತು. ಗಾಳಿ, ಮಳೆಯಿಂದ ಹಾನಿಗೊಳಗಾದ ಬೆಳೆನಷ್ಟಕ್ಕೆ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next