Advertisement

Heavy Rains ಜಿಲ್ಲೆಯಾದ್ಯಂತ ಗುಡುಗು ಸಹಿತ ಮಳೆ

11:12 PM Nov 03, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಶುಕ್ರವಾರ ಮಳೆಯಾದ ವರದಿಯಾಗಿದೆ.

Advertisement

ಮೂಡುಬಿದಿರೆ, ಪುತ್ತೂರು, ಸುಬ್ರಹ್ಮಣ್ಯ, ಪುಂಜಾಲಕಟ್ಟೆ, ಬಡಗನ್ನೂರು, ನಿಡ³ಳ್ಳಿ, ಈಶ್ವರ ಮಂಗಲ, ಕುಂಬ್ರ, ಅರಿಯಡ್ಕ, ಕಾವು, ಸುಳ್ಯ, ಸುಬ್ರಹ್ಮಣ್ಯ, ಬೆಳ್ಳಾರೆ, ಪಂಜ, ಕೊಲ್ಲಮೊಗ್ರು, ಕಡಬ ಸಹಿತ ಜಿಲ್ಲೆಯ ಹಲವೆಡೆ ಸಂಜೆ ವೇಳೆ ಗುಡುಗು ಸಹಿತ ಮಳೆಯಾಗಿದೆ. ಮಂಗಳೂರು ಮತ್ತು ಉಡುಪಿ ನಗರದಲ್ಲಿ ಸಂಜೆಯವರೆಗೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ರಾತ್ರಿ ಗುಡುಗಿನಿಂದ ಕೂಡಿದ ಮಳೆಯಾಗಿದೆ.

ಈಶ್ವರಮಂಗಲ: ಮನೆಗೆ ಹಾನಿ
ಈಶ್ವರ ಮಂಗಲದ ನೆಟ್ಟಣಿಗೆ ಮುಟ್ನೂರು ಗ್ರಾಮದ ಕರ್ನೂರು ಅಲ್ಲಾಬಿ ಮೂಲೆ ಎಂಬಲ್ಲಿ ಜಮೀಲಾ ಅವರ ಮನೆಗೆ ಗುರುವಾರ ರಾತ್ರಿ ಸಿಡಿಲು ಬಡಿದು ಮನೆ ಹಾಗೂ ವಿದ್ಯುತ್‌ ಉಪಕರಣಗಳಿಗೆ ಹಾನಿಯಾಗಿದೆ. ಎರಡು ತೆಂಗಿನ ಮರಗಳು ಸುಟ್ಟು ಹೋಗಿವೆ. ಕಂದಾಯ, ಮೆಸ್ಕಾಂ ಸಿಬಂದಿ, ಪಂಚಾಯತ್‌ ಸದಸ್ಯ ಶ್ರೀರಾಮ ಪಕ್ಕಳ ಭೇಟಿ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next