Advertisement
ಧಾರಾಕಾರ ಮಳೆಯಿಂದಾಗಿ ಚರಂಡಿ ನೀರು ರಸ್ತೆಗೆ ನುಗ್ಗಿ ಇಬ್ಬರು ಕೊಚ್ಚಿಹೋಗಿದ್ದಾರೆ ಎಂದು ಎಸಿಪಿ ಕೆ. ಪುರುಷೋತ್ತಮ್ ಅವರು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
Related Articles
Advertisement
ಹೈದರಾಬಾದ್ ಮಹಾನಗರ ಪಾಲಿಕೆ, ರಂಗರೆಡ್ಡಿ, ಮೇಲ್ಚಡ್ ಮಲ್ಕಾಜರಿ, ಅಮೀರ್ ಪೇಟೆ, ಸೋಮಾಜಿ ಗುಡ್ಡ, ಬಂಜಾರ ಬೆಟ್ಟ ಮತ್ತು ಜುಬಿಲಿ ಬೆಟ್ಟ, ಅಂಬೇರ್ ಪೇಟ್, ನಾಂಪಲ್ಲಿ, ಹಳೆ ಮಾಲಕ್ಪೇಟೆ, ಯಾಕುತ್ಪುರ, ಎಲ್ಬಿ ನಗರ, ಮತ್ತು ವನಸ್ಥಲಿಪುರಂ ಮುಂತಾದ ಕಡೆಗಳಲ್ಲಿ ಭಾರಿ ಮಳೆಯಾಗಿದೆ.
ಶನಿವಾರ ಕೂಡ ಭಾರಿ ಮಳೆ ಸುರಿಯುವ ಮುನ್ಸೂಚನೆಯಿದ್ದು, ಜನರು ಮನೆಯೊಳಗೆ ಇರುವಂತೆ ನಗರದ ಮೇಯರ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ಕೊಂಕಣ ತೀರ, ಗೋವಾ, ಕೇರಳ, ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಉತ್ತರ ಭಾರತದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.