Advertisement

ಘಾಟ್ ಪ್ರದೇಶದಲ್ಲಿ ಭಾರೀ ಮಳೆ: ಧುಮ್ಮಿಕ್ಕಿ ಹರಿಯುತ್ತಿರುವ ಬಂಡಾಜೆ ಅರ್ಬಿ ಫಾಲ್ಸ್

03:28 PM Nov 16, 2021 | Team Udayavani |

ಬೆಳ್ತಂಗಡಿ: ಚಿಕ್ಕಮಗಳೂರು ಸೇರಿದಂತೆ ಘಾಟ್ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ದಿಡುಪೆ ಪ್ರದೇಶದ ಹಳ್ಳಗಳು ತುಂಬಿ ಹರಿಯಲಾರಂಬಿಸಿದೆ.

Advertisement

ರಾಷ್ಟ್ರೀಯ ಉದ್ಯಾನದಂಚಿನಲ್ಲಿರುವ ಬಂಡಾಜೆ ಅರ್ಬಿ ಫಾಲ್ಸ್ ಧುಮ್ಮಿಕ್ಕಿ ಹರಿಯುವ ದೃಶ್ಯ ಸ್ಥಳೀಯರು ಸೆರೆ ಹಿಡಿದಿದ್ದಾರೆ.

ಕಳೆದ ಎರಡು ದಿನಗಳ ಹಿಂದಿನಿಂದ ಬೆಳ್ತಂಗಡಿ ತಾಲೂನಾದ್ಯಂತ ಸಂಜೆಯಾಗುತ್ತಲೆ ಭಾರೀ ಮಳೆ ಸುರಿಯುತ್ತಿದೆ.

ಇದೀಗ ದಿಡುಪೆ ಪರಿಸರದಲ್ಲಿ ನಿರಂತರ 3 ಗಂಟೆ ಭಾರಿ ಗಾಳಿ ಮಳೆ ಸುರಿಯುತ್ತಿರುವ ಪರಿಣಾಮ ಹಳ್ಳ, ತೋಡುಗಳಲ್ಲಿ ಹರಿವು ಹೆಚ್ಚಾಗಿದ್ದು ನೇತ್ರಾವತಿ ನದಿಯಲ್ಲಿ ನೀರು ಹೆಚ್ಚಾಗುವ ಸಂಭವವಿದೆ.

Advertisement

ದಿಡುಪೆ ಸಮೀಪ ಹಳ್ಳಗಳಿಗೆ ಹಾಕಿದ ತಾತ್ಕಾಲಿಕ ಮರದ ಪಾಲಗಳು ಕೊಚ್ಚಿಹೋಗಿವೆ.

Advertisement

Udayavani is now on Telegram. Click here to join our channel and stay updated with the latest news.

Next