Advertisement

ಮಹಾರಾಷ್ಟ್ರ ಕೊಂಕಣ-ರಾಜ್ಯದ ಗಡಿಯಲ್ಲಿ ಧಾರಾಕಾರ ಮಳೆ: ನದಿ ನೀರಿ‌ನ ಮಟ್ಟದಲ್ಲಿ ಏರಿಕೆ

01:08 PM Aug 05, 2020 | Mithun PG |

ಚಿಕ್ಕೋಡಿ: ಮಹಾರಾಷ್ಟ್ರ ಕೊಂಕಣ ಪ್ರದೇಶ ಮತ್ತು ರಾಜ್ಯದ ಗಡಿ ಭಾಗದಲ್ಲಿ ಕಳೆದ 24 ಗಂಟೆಗಳಲ್ಲಿ ಧಾರಾಕಾರ ಮಳೆ ಸುರಿಯಲಾರಂಭಿಸಿದೆ. ಗಡಿ ಭಾಗದ ನದಿಗಳ ನೀರಿನ ಮಟ್ಡದಲ್ಲಿ ಕೂಡ  ಭಾರೀ ಏರಿಕೆ ಕಂಡುಬಂದಿದೆ.

Advertisement

ಮಹಾರಾಷ್ಟ್ರದ ಜಲಾನಯನ ಪ್ರದೇಶವಾದ ಕೋಯ್ನಾ-247 ಮಿ.ಮೀ. ದೂಧಗಂಗಾ-227 ಮಿ.ಮೀ. ರಾಧಾನಗರಿ-281 ಮಿ.ಮೀ.ತುಳಸಿ-249 ಮಿ.ಮೀ. ಕಾಸರಿ-205 ಮಿ.ಮೀ ಮಳೆ ಸುರಿದಿದೆ. ಈಗಲೂ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.

ಮಹಾರಾಷ್ಟ್ರ ಮತ್ತು ರಾಜ್ಯದ ಗಡಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳ ನೀರಿನ ಮಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕೃಷ್ಣಾ ನದಿಗೆ ಸುಮಾರು 50 ಸಾವಿರ ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ.

ಇದೇ ರೀತಿ ಮಳೆ ಸುರಿಯಲಾರಂಭಿಸಿದರೆ ಪ್ರವಾಹ ಮತ್ತೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next