Advertisement
ಕಳೆದ ಮೂರು ದಿನಗಳ ಹಿಂದೆ ಈ ಪ್ರದೇಶಗಳಲ್ಲಿ ಭತ್ತದ ಸಸಿಗಳಿಗಗೆ ಬೀಜಗಳನ್ನು ಬಿತ್ತಲಾಗಿತ್ತು. ಈಗಾಗಲೇ ಬಿತ್ತಿದ ಎಂ.ಒ.4 ಭತ್ತದ ತಳಿ ಪ್ರಸ್ತುತ ರೈತರಿಗೆ ಸಿಗುತ್ತಿಲ್ಲ. ಕೃಷಿ ಇಲಾಖೆಯಲ್ಲೂ ಎಂ.ಒ.4 ತಳಿ ಪ್ರಸ್ತುತ ಲಭ್ಯವಿಲ್ಲದೆ ರೈತರು ಕಂಗಾಲಾಗಿದ್ದಾರೆ. ಉಳಿದಂತೆ ಮುಕ್ತಿ,ಜಯ ಮುಂತಾದ ತಳಿಯ ಬೀಜಗಳನ್ನು ರೈತರು ಬಳಸುತ್ತಿಲ್ಲ. ಒಟ್ಟಿನಲ್ಲಿ ಅತಿ ವೃಷ್ಟಿಯಿಂದ ಈ ಭಾಗದ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ.
ನಾನು ಸಹಕಾರಿ ಬ್ಯಾಂಕ್ವೊಂದರಲ್ಲಿ ಸಾಲ ಮಾಡಿ ಬೀಜ ಬಿತ್ತನೆ ಕಾರ್ಯ ಆರಂಭಿಸಿದ್ದೆ.ಆದರೆ ಈಗ ಬಂದ ಧಾರಾಕಾರ ಮಳೆಯಿಂದ ಬಿತ್ತಿದ ಬೀಜ ಕೊಚ್ಚಿಕೊಂಡು ಹೋಗಿದೆ.ಮತ್ತೂಮ್ಮೆ ಬೀಜ ಬಿತ್ತಲು ಪುನ: ಸಾಲ ಕೊಡುವುದಿಲ್ಲ.ಈಗಾಗಲೇ ನನಗೆ ರೂ.20,000ದಷ್ಟು ನಷ್ಟ ಸಂಭವಿಸಿದೆ.ಮಾಡಿದ ಸಾಲವನ್ನು ಸರಕಾರ ಮನ್ನಾ ಮಾಡಿದರೆ ನನ್ನಂತಹ ಅನೇಕ ರೈತರಿಗೆ ಉಪಕಾರ ಮಾಡಿದಂತಾಗುತ್ತದೆ.
– ರಾಮ ಪೂಜಾರಿ, ಕೃಷಿಕ