Advertisement

ಮೂಡಿಗೆರೆ: ಕಾರಿನ ಮೇಲೆ ಬಿದ್ದ ಮರ; ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

11:27 AM May 05, 2022 | Team Udayavani |

ಚಿಕ್ಕಮಗಳೂರು: ರಾತ್ರಿಯಿಡಿ ಸುರಿದ ಮಳೆಗೆ ಕಾರಿನ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಗುರುವಾರ ಬೆಳಗ್ಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ನೀಡುವಳೆಯಲ್ಲಿ ನಡೆದಿದೆ.

Advertisement

ಕಾರಿನ ಮುಂಭಾಗ ಜಖಂಗೊಂಡಿದ್ದು, ಪ್ರಯಾಣಿಕರಾದ ಮಂಜುನಾಥ್ ಕೃಷ್ಣ ಸಚಿನ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ರಾತ್ರಿಯಿಡಿ ಸುರಿದ ಮಳೆಗೆ ರಸ್ತೆ ಮೇಲೆ, ವಿದ್ಯುತ್ ಕಂಬದ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಬಾಳೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next