Advertisement

Heavy Rain ಕುಂದಾಪುರ: ಹೆದ್ದಾರಿಯಲ್ಲೇ ಸಾಗಿದ ಮಳೆನೀರು

12:45 AM Jul 16, 2024 | Team Udayavani |

ಕುಂದಾಪುರ: ಸೋಮವಾರ ದಿನವಿಡೀ ಕುಂದಾಪುರ, ಬೈಂದೂರು ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ. ಹೆದ್ದಾರಿಯ ಸರ್ವಿಸ್‌ ರಸ್ತೆಗಳು ಸಹಿತ ಹಲವು ಪ್ರಮುಖ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ತೊಡಕು ಉಂಟಾಯಿತು.

Advertisement

ಸಂಜೆ 6 ಗಂಟೆಯಿಂದ ಆರಂಭ ಗೊಂಡ ಮಳೆಯಂತೂ ಒಂದೂವರೆ ಗಂಟೆಗೂ ಹೆಚ್ಚು ಕಾಲ ಬಂದಿದ್ದು, ಇದರಿಂದ ಕುಂದಾಪುರ ನಗರದ ಸರ್ವಿಸ್‌ ರಸ್ತೆಯು ಹಲವೆಡೆ ಹೊಳೆ ಯಂತಾಗಿತ್ತು. ಬಸ್ರೂರು ಮೂರುಕೈ, ಸಂತೆ ಮಾರುಕಟ್ಟೆ, ಕೆಎಸ್‌ ಆರ್‌ಟಿಸಿ ಬಸ್‌ ನಿಲ್ದಾಣ ಎದುರು, ಹಂಗಳೂರು, ಸರ್ಜನ್‌ ಆಸ್ಪತ್ರೆ ಬಳಿ ಸರ್ವಿಸ್‌ ರಸ್ತೆ ಜಲಾವೃತಗೊಂಡಿತ್ತು. ಇದರಿಂದ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು.

ಕೋಟೇಶ್ವರ, ಬೀಜಾಡಿ, ಗೋಪಾಡಿ ಪರಿಸರದ ಹಲವೆಡೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಬೀಜಾಡಿಯ ಮೀನುಗಾರಿಕೆ ರಸ್ತೆ ಸಹಿತ ಪ್ರಮುಖ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ಹರಿದು ಹೋಗಿ ಸ್ಥಳೀಯರು ತೊಂದರೆ ಅನುಭವಿಸಿದರು.

ಗದ್ದೆಗಳು ಜಲಾವೃತ
ಕುಂದಾಪುರ ಭಾಗದ ನೂರಾರು ಹೆಕ್ಟೇರ್‌ ನಾಟಿ ಮಾಡಿರುವ ಗದ್ದೆಗಳು ಜಲಾವೃತಗೊಂಡಿವೆ. ನಾವುಂದದ ಸಾಲುºಡ, ಅರೆಹೊಳೆ, ನಾಡದ ಚಿಕ್ಕಳ್ಳಿ, ಕುದ್ರು, ಪಡುಕೋಣೆ, ಮರವಂತೆ, ಸೌಕೂರು, ಬಸ್ರೂರು ಭಾಗದಲ್ಲಿ 10 ದಿನಗಳಿಂದಲೂ ಗದ್ದೆಗಳು ಮುಳುಗಡೆಯಾಗಿದ್ದು, ಈ ಬಾರಿಯ ಬೆಳೆ ಕೈಗೆ ಸಿಗದ ಪರಿಸ್ಥಿತಿಯಿದೆ. ಕುಂದಾಪುರ ತಾಲೂಕಿನಲ್ಲಿ ಗಾಳಿ – ಮಳೆಯಿಂದಾಗಿ 10ಕ್ಕೂ ಮಿಕ್ಕಿಮನೆಗಳಿಗೆ ಮರ ಬಿದ್ದು, ಹಾನಿಯಾಗಿದೆ. ಜನ್ಸಾಲೆಯಲ್ಲಿ ಅಡಿಕೆ ಮರಗಳು ಬಿದ್ದಿವೆ.

Advertisement

Udayavani is now on Telegram. Click here to join our channel and stay updated with the latest news.

Next