Advertisement

ಜಿಟಿಜಿಟಿ ಮಳೆ ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ

05:38 PM Jul 14, 2022 | Team Udayavani |

ಶಹಾಬಾದ: ನಗರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಕಳೆದ ಎರಡು, ಮೂರು ದಿನಗಳಿಂದ ಜಿಟಿಜಟಿ ಮಳೆ ಬಿಟ್ಟುಬಿಟ್ಟು ಬರುತ್ತಿದ್ದು, ಹಗಲು ರಾತ್ರಿ ಸುರಿಯುತ್ತಿರುವದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ.

Advertisement

ಬೇರೆ ತಾಲೂಕಿನಲ್ಲಿ ಈಗಾಗಲೇ ಹೆಸರು, ಉದ್ದು ಬಿತ್ತನೆ ಮಾಡಿದ್ದಾರೆ. ಆದರೆ ಶಹಾಬಾದ ತಾಲೂಕಿನಲ್ಲಿ ಸರಿಯಾದ ಸಮಯಕ್ಕೆ ಮಳೆ ಆಗದೇ ಇದ್ದುದರಿಂದ ಬಿತ್ತನೆ ಮಾಡಿಲ್ಲ. ಒಂದು ಮಳೆ ಬಿದ್ದರೇ ಬಿತ್ತನೆ ಮಾಡಬೇಕೆಂದು ಸಕಲ ಸಿದ್ದತೆ ಮಾಡಿಕೊಂಡಿದ್ದ ರೈತ. ಆದರೆ ಮೂರು ದಿನಗಳಿಂದ ಎಡೆಬಿಡದೇ ಮಳೆಯಾಗುತ್ತಿರುವುದರಿಂದ ಬಿತ್ತನೆಗೂ ಸಂಕಷ್ಟ ಬಂದಿದೆ.

ಅಲ್ಲದೇ ನಗರದ ಹೊರವಲಯದ ಹದಗೆಟ್ಟ ರಸ್ತೆಗಳ ತಗ್ಗು ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ಸಾರ್ವಜನಿಕರು ಬೀಳುತ್ತಿದ್ದಾರೆ. ಸಂಚಾರಕ್ಕೆ ಕಷ್ಟವಾಗುತ್ತಿದೆ. ನಗರದ ಬಸವೇಶ್ವರ ವೃತ್ತದಿಂದ ಶಾಸ್ತ್ರಿ ವೃತ್ತದವರೆಗಿನ ರಸ್ತೆಯ ಮೇಲೆ ಸಾಕಷ್ಟು ಪ್ರಮಾಣದಲ್ಲಿ ರಸ್ತೆಯ ಮೇಲೆ ನೀರು ನಿಲ್ಲುತ್ತಿದೆ. ಈ ಬಗ್ಗೆ ಯಾರು ಗಮನಹರಿಸುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next