Advertisement

ಉಕ್ಕಿ ಹರಿಯುತ್ತಿರುವ ನದಿ ನೀರಿನಲ್ಲೇ ನಡೆದು ಮುಕ್ತಿಧಾಮದಲ್ಲಿ ಕಾರ್ಯ ಮುಗಿಸಿದ ಕುಟುಂಬ

10:02 AM Jul 30, 2024 | Team Udayavani |

ಮುಧೋಳ: ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಿದ ಕುಟುಂಬವೊಂದು ಮರುದಿನ ನದಿ ನೀರಿನಲ್ಲಿಯೇ ತೆರಳಿ ಕಾರ್ಯಮುಗಿಸಿದ ಘಟನೆ ನಗರದ ರಾಜ್ ಘಾಟ್ ಮುಕ್ತಿಧಾಮದಲ್ಲಿ ನಡೆದಿದೆ.

Advertisement

ಕೇವಲ‌‌‌ ಒಂದು ರಾತ್ರಿ ಕಳೆಯುವುದರೊಳಗೆ ಸ್ಮಶಾನದ ಸುತ್ತ ಘಟಪ್ರಭಾ ನದಿ ನೀರು ಆವರಿಸಿದ ಪರಿಣಾಮ‌ ಅಂತ್ಯಸಂಸ್ಕಾರದ ಮರುದಿನದ ಕಾರ್ಯಕ್ಕೆ ಅಡಚಣೆಯಿಂಟಾಯಿತು.

ಅಂತ್ಯಸಂಸಸ್ಕಾರಕ್ಕೆ‌ ಬಂಧುಬಳಗವೆಲ್ಲ ಸೇರಿದ್ದರು. ಆದರೆ ಮರುದಿನದ ಕಾರ್ಯಕ್ಕೆ ನದಿನೀರು ಅಡ್ಡಿಯಾದ‌ ಕಾರಣ ಕುಟುಂಬಸ್ಥರಷ್ಟೆ ನೀರಿನಲ್ಲಿ ತೆರಳಿ ಬೂದಿಬಳಿದುಕೊಂಡು ಬರುವಂತಾಯಿತು.

ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಯಿಂದಾಗಿ ಮುಧೋಳ ನಗರವೂ ಸೇರಿದಂತೆ ಕೆಲ ಹಳ್ಳಿಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಇದನ್ನೂ ಓದಿ: ದಿನಾ ಕುಡಿದು ಶಾಲೆಯಲ್ಲೇ ತೂರಾಡುತ್ತಿದ್ದ ಶಿಕ್ಷಕ… ಮಕ್ಕಳ ಪೋಷಕರು ಮಾಡಿದ್ದೇನು ಗೊತ್ತಾ?

Advertisement
Advertisement

Udayavani is now on Telegram. Click here to join our channel and stay updated with the latest news.

Next