Advertisement

ಬೈಂದೂರು: ಗಾಳಿ ಮಳೆಗೆ ಭಾರಿ ಹಾನಿ, 5 ಸಾವಿರ ಕೋಳಿ ಸಾವು, ಮನೆಗೆ ನುಗ್ಗಿದ ಗುಡ್ಡದ ನೀರು!

01:47 PM Sep 07, 2020 | keerthan |

ಬೈಂದೂರು: ಕಳೆದ ರಾತ್ರಿ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಉಡುಪಿ ಜಿಲ್ಲೆಯ ಬೈಂದೂರು ಪರಿಸರದಲ್ಲಿ ಅಪಾರ ಪ್ರಮಾಣದ ನಷ್ಟವಾಗಿದೆ. ಉಪ್ಪುಂದದಲ್ಲಿ ಮನೆಗೆ ಸಿಡಿಲು ಬಡಿದು ನಷ್ಟವಾಗಿದ್ದರೆ, ಚಕತ್ತಿಲ್ ನಲ್ಲಿ ಕೋಳಿ ಫಾರ್ಮ್ ಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟವಾಗಿದೆ.

Advertisement

ಕಳೆದ ರಾತ್ರಿ ಭಾರಿ ಗಾಳಿ ಮಳೆಯಿಂದ ಚಕತ್ತಿಲ್ ನಲ್ಲಿ ಬಿಜೆ ಬೆನ್ನಿ ಎಂಬವರ ಕೋಳಿ ಫಾರ್ಮ್ ಗೆ ನೀರು ನುಗ್ಗಿದೆ. ಪರಿಣಾಮ ಸುಮಾರು 5 ಸಾವಿ ಕೋಳಿಗಳು ಸಾವನ್ನಪ್ಪಿದೆ ಎಂದು ವರದಿಯಾಗಿದೆ.

ಉಪ್ಪುಂದ ಗಿರಿಜಾ ಮಡವಾಳ ಎಂಬವರ ಮನೆಗೆ ಸಿಡಿಲು ಬಡಿದು ನಷ್ಟ ಸಂಭವಿಸಿದೆ. ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ವಸ್ತುಗಳು ಚೆಲ್ಲಾಪಿಲ್ಲಿಯಾಗಿದೆ. ಘಟನೆಯಲ್ಲಿ ಒಂದು ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

Advertisement

ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಯಳಜಿತ್ ಎಂಬಲ್ಲಿ ದೇವಪ್ಪ ಪೂಜಾರಿ ಎಂಬವರ ಮನೆಗೆ ಗುಡ್ಡದ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಗುಡ್ಡದ ನೀರು ನುಗ್ಗಿದ್ದರಿಂದ ಭತ್ತದ ಬೆಳೆ, ಬಾಳೆ ತೋಟಗಳಿಗೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next