Advertisement

Rain: ತುಂಗಾ ತೀರದಲ್ಲಿ ದಿಢೀರ್ ಪ್ರವಾಹ ಭೀತಿ; ಬಿದನೂರು ನಗರದಲ್ಲಿ 316 ಮಿಮೀ ದಾಖಲೆ ಮಳೆ

03:13 PM Jul 30, 2024 | Suhan S |

ಶಿವಮೊಗ್ಗ: ಇನ್ನೇನು ಮಳೆ ಕಡಿಮೆಯಾಯ್ತು ಎಂದು ನಿಟ್ಟುಸಿರು ಬಿಟ್ಟಿದ್ದ ಜನರಿಗೆ ವರುಣದೇವ ಶಾಕ್ ಕೊಟ್ಟಿದ್ದಾನೆ. ಮಲೆನಾಡು ಭಾಗದಲ್ಲಿ ದಿಢೀರ್ ಭಾರೀ ಮಳೆಯಿಂದ ತುಂಗಾ ತೀರದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.

Advertisement

ಸೋಮವಾರ ಬೆಳಗ್ಗೆ 35 ಸಾವಿರ ಕ್ಯೂಸೆಕ್ಸ್ಗೆ ಕುಸಿದಿದ್ದ ತುಂಗಾ ನದಿ ಒಳಹರಿವು ಮಂಗಳವಾರ ಬೆಳಗ್ಗೆಗೆ 50 ಸಾವಿರ ಕ್ಯೂಸೆಕ್ಸ್ಗೆ ಏರಿಕೆಯಾಗಿದೆ. ಮಧ್ಯಾಹ್ನ 2 ಗಂಟೆ ಹೊತ್ತಿಗೆ 77 ಸಾವಿರ ಕ್ಯೂಸೆಕ್ಸ್ಗೆ ದಾಟಿದ್ದು ಸಂಜೆ ಹೊತ್ತಿಗೆ 90 ರಿಂದ 1 ಲಕ್ಷ ಕ್ಯೂಸೆಕ್ಸ್ವರೆಗೂ ಏರಿಕೆಯಾಗುವ ಸಾಧ್ಯತೆ ಇದೆ. ತೀರ್ಥಹಳ್ಳಿಯ ರಾಮಮಂಟಪ ಇದೇ ಮೊದಲ ಬಾರಿಗೆ ಮುಳುಗಿದ್ದು ಪ್ರವಾಹದ ಮನ್ಸೂಚನೆ ತೋರಿಸಿದೆ. ರಾತ್ರಿವರೆಗೂ ಮಳೆ ಇಲ್ಲ ಎಂದು ಸುಮ್ಮನಾಗಿದ್ದ ನೀರಾವರಿ ಇಲಾಖೆ ಅಧಿಕಾರಿಗಳು ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.

ಬಿದನೂರು ನಗರದಲ್ಲಿ 316 ಮಿಮೀ ಮಳೆ:

ಮಂಗಳವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಬಿದನೂರುನಗರದಲ್ಲಿ ರಾಜ್ಯದಲ್ಲೇ ಅತ್ಯಧಿಕ 316 ಮಿ.ಮೀ. ಮಳೆ ದಾಖಲಾಗಿದೆ. ಇದರಿಂದ ನಗರ ವ್ಯಾಪ್ತಿಯಲ್ಲಿ ಪ್ರವಾಹ ಎದುರಾಗಿತ್ತು. ಕೆಲ ಶಾಲೆಗಳಿಗೆ ರಹೆ ಸಹ ನೀಡಲಾಗಿತ್ತು.

ಮಾಸ್ತಿಕಟ್ಟೆ 240 ಮಿಮೀ, ಚಕ್ರಾನಗರ 220 ಮಿಮೀ, ಯಡೂರು 217 ಮಿಮೀ, ಹುಲಿಕಲ್ 210 ಮಿಮೀ ಮಳೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next