Advertisement

ಕಾಪು ತಾಲೂಕಿನಲ್ಲಿ ದೀಪಾವಳಿ ಸಂಭ್ರಮಾಚರಣೆಗೆ‌ ಮಳೆ ಅಡ್ಡಿ

06:49 PM Nov 04, 2021 | Team Udayavani |

ಕಾಪು : ಕಾಪು ತಾಲೂಕಿನಾದ್ಯಂತ ದೀಪಾವಳಿಯ ಸಂಭ್ರಮಕ್ಕೆ‌‌ ಮಳೆ ಅಡ್ಡಿಯನ್ನುಂಟು ಮಾಡಿದೆ. ಗುರುವಾರ ಸಂಜೆ 4.30 ರಿಂದ ನಿರಂತರ ಮಳೆ ಸುರಿಯುತ್ತಿದ್ದು ಗದ್ದೆ, ರಸ್ತೆ, ಚರಂಡಿಗಳಲ್ಲಿ ಮಳೆ ನೀರು ಕೃತಕ ನೆರೆಯಂತೆ ಹರಿಯಲಾರಂಭಿಸಿದೆ.

Advertisement

ಕಾಪು ಪೇಟೆಯಲ್ಲಿ ಭರ್ಜರಿಯಾಗಿ ನಡೆಯುತ್ತಿದ್ದ ಹೂವು, ತರಕಾರಿ, ಪಟಾಕಿ ವ್ಯಾಪಾರ ಒಮ್ಮೆಲೆ ಸ್ತಬ್ಧಗೊಂಡಿದ್ದು, ಜನ ಸಂಚಾರವಿಲ್ಲದೇ ಪೇಟೆ ಬಿಕೋ ಎನ್ನುತ್ತಿದೆ.

ಮಳೆ, ಮೋಡ ಮತ್ತು ಗುಡುಗು, ಸಿಡಿಲಿನಿಂದಾಗಿ 5 ಗಂಟೆಯಿಂದಲೇ ಕತ್ತಲಾರಂಭಿಸಿದ್ದು, ವಿದ್ಯುತ್‌ ಕೂಡಾ ಕೈ ಕೊಟ್ಟಿದ್ದರಿಂದ ಜನ ಪರದಾಡುವಂತಾಗಿದೆ.

ಹಬ್ಬದ ಸಂಭ್ರಮಕ್ಕೆ‌ ಮಳೆ‌ ಅಡ್ಡಿಯಾಗಿದ್ದು ಸಾಂಪ್ರದಾಯಿಕವಾಗಿ ನಡೆಯುವ ಬಲೀಂದ್ರ ಪೂಜೆ, ಸೊಡರ ಹಬ್ಬ, ತುಳಸಿ ಪೂಜೆ ಸಹಿತ ಇನ್ನಿತರ ಸಂಭ್ರಮಾಚರಣೆಗೆ ತೊಡಕುಂಟಾಗಿದೆ.

ಇದನ್ನೂ ಓದಿ : ಕಾಪು ಪೇಟೆಯಲ್ಲಿ ದೀಪಾವಳಿ ಹಬ್ಬಕ್ಕೆ ಭರ್ಜರಿ ವ್ಯಾಪಾರ, ವಹಿವಾಟು

Advertisement

ಗದ್ದೆಗಳಲ್ಲಿ ನೀರು ತುಂಬಿ ಕೊಂಡಿದ್ದು ಬಲೀಂದ್ರ ಪೂಜೆಗೂ ಅಡ್ಡಿಯುಂಟಾಗಿದೆ. ಭರ್ಜರಿಯಾಗಿ ಪಟಾಕಿ‌ ಮಾರಾಟ ನಡೆದಿದ್ದರೂ, ಪಟಾಕಿ ಬಿಡುವುದಕ್ಕೂ ಮಳೆ ಅಡ್ಡಿಯನ್ನುಂಟು ಮಾಡುತ್ತಿದೆ.

ಒಂದು ಗಂಟೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೆದ್ದಾರಿಯಲ್ಲಿ ನೀರು ನಿಂತು ಸಂಚಾರ ವ್ಯವಸ್ಥೆಯಲ್ಲೂ ವೃತ್ಯಯವುಂಟಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next