Advertisement

ಹುಣಸೂರಿನಲ್ಲಿ ಧಾರಾಕಾರ ಮಳೆ: ಅಂಗಡಿ-ಮನೆಗೆ ನುಗ್ಗಿದ ಚರಂಡಿ ನೀರು

09:55 PM May 08, 2023 | Team Udayavani |

ಹುಣಸೂರು: ಹುಣಸೂರು ಸಂಜೆ ಸುರಿದ ಅಪಾರ ಮಳೆಗೆ ನಗರದ ವಿವಿಧೆಡೆ ಅವಾಂತರ ಸೃಷ್ಟಿಸಿದ್ದರೆ, ವಿದ್ಯುತ್ ಪ್ರವಹಿಸಿ ಎರಡು ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

Advertisement

ನಗರದ ಶಬ್ಬೀರ್‌ನಗರದ ಮುಖ್ಯರಸ್ತೆ ಬಳಿಯ ಗುಜರಿ ಅಂಗಡಿ, ಹೋಟೆಲ್, ಕಾರ್ ಶೋರೂಂಗಳಿಗೆ ಮಳೆ ನೀರು ನುಗ್ಗಿದೆ. ಅಲ್ಲದೆ ಅಕ್ಕಪಕ್ಕದ ಮನೆಗಳಿಗೂ ಸಹ ಚರಂಡಿ ನೀರು ನುಗ್ಗಿದ್ದರೆ, ಗುಜರಿ ಅಂಗಡಿಯಲ್ಲಿ ದಾಸ್ತಾನಿದ್ದ ಪ್ಲಾಸ್ಟಿಕ್ ಚೀಲ, ರಟ್ಟಿನ ಕಟ್ಟುಗಳು ಮಳೆಯ ನೀರಿನೊಂದಿಗೆ ಕೊಚ್ಚಿ ಹೋಗಿ ಅಪಾರ ನಷ್ಟ ಉಂಟಾಗಿದ್ದು, ಗಂಟೆಕಾಲ ಮುಖ್ಯರಸ್ತೆ ಮೇಲೆ ಎರಡು ಅಡಿಗಳಷ್ಟು ನೀರು ಹರಿದಿದ್ದು, ಮಳೆ ನಿಂತ ಮೇಲೂ ನಿವಾಸಿಗಳು ಓಡಾಡಲು ಪರದಾಡಿದರು.

ಎರಡು ಕುರಿಗಳು ಸಾವು:
ನಗರದ ಮೈಸೂರು ರಸ್ತೆಯ ಹಾಲಿನ ಶೀಥಲೀಕರಣ ಕೇಂದ್ರದ ಬಳಿ ಮೇಯುತ್ತಿದ್ದ ಕುರಿಗಳಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಎರಡು ಕುರಿಗಳು ಸಾವನ್ನಪ್ಪಿವೆ. ದೂರದ ತುಮಕೂರು ಜಿಲ್ಲೆಯ ಶಿರಾದ ನಾಗರಾಜರಿಗೆ ಸೇರಿದ ಕುರಿಗಳು ಇವಾಗಿದೆ.

ಇದನ್ನೂ ಓದಿ: ದಸರಾ ಆನೆ ಬಲರಾಮನಿಗೆ ಅಂತಿಮ ವಿದಾಯ; ಕಂಬನಿ ಮಿಡಿದ ರಾಜಮನೆತನ

Advertisement

Udayavani is now on Telegram. Click here to join our channel and stay updated with the latest news.

Next